alex Certify ಚೀನಾಗೆ ಬೆಂಬಲ, ಭಾರತೀಯ ಯೋಧರ ಅವಹೇಳನ: ಪೋಸ್ಟ್ ಹಾಕಿ ಯುವಕ ಪರಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೀನಾಗೆ ಬೆಂಬಲ, ಭಾರತೀಯ ಯೋಧರ ಅವಹೇಳನ: ಪೋಸ್ಟ್ ಹಾಕಿ ಯುವಕ ಪರಾರಿ

ಗದಗ ಜಿಲ್ಲೆಯ ರೋಣ ಪಟ್ಟಣದ ನಿವಾಸಿಯಾಗಿರುವ ಯುವಕನೊಬ್ಬ ಭಾರತೀಯ ಯೋಧರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದಾನೆ.

ಸೌದತ್ತಿ ತಾಲೂಕಿನ ಮುನವಳ್ಳಿ ಮೂಲದ ಬಸವರಾಜ ಗೋಮಾಡಿ ಎಂಬ ಯುವಕ ಬಸವರಾಜ್ ಯಶ್ ಎಂಬ ಹೆಸರಿನಿಂದ ಫೇಸ್ಬುಕ್ನಲ್ಲಿ ಚೀನಾ ಸೈನಿಕರನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದಾನೆ. ಇದೇ ವೇಳೆ ಭಾರತೀಯ ಯೋಧರನ್ನು ಅವಹೇಳನ ಮಾಡಿದ್ದು, ಆತನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ರೋಣದ ಮುಲ್ಲನಭಾವಿ ಓಣಿಯಲ್ಲಿ ಮೊಬೈಲ್ ಶಾಪ್ ನಡೆಸುತ್ತಿದ್ದ ಬಸವರಾಜ, ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪರಾರಿಯಾಗಿದ್ದು, ಮಾಹಿತಿ ಪಡೆದ ಪೊಲೀಸರು ಕ್ರಮಕೈಗೊಂಡಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...