alex Certify ರಾಜ್ಯದ ಸಮಸ್ಯೆಯನ್ನ ಕೇಂದ್ರ ಸಚಿವನ ಬಳಿ ಏಕೆ ಕೇಳ್ತೀರಿ…..? ಪಕ್ಷದ ಕಾರ್ಯಕರ್ತನಿಗೆ ಸದಾನಂದ ಗೌಡ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಸಮಸ್ಯೆಯನ್ನ ಕೇಂದ್ರ ಸಚಿವನ ಬಳಿ ಏಕೆ ಕೇಳ್ತೀರಿ…..? ಪಕ್ಷದ ಕಾರ್ಯಕರ್ತನಿಗೆ ಸದಾನಂದ ಗೌಡ ಪ್ರಶ್ನೆ

ಕೊರೊನಾ ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್​ ಕೆಲವೊಂದು ನಿರ್ದೇಶನಗಳನ್ನ ನೀಡಿತ್ತು. ಆದರೆ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ಸದಾನಂದ ಗೌಡ ಸಾಕಷ್ಟು ಲಸಿಕೆ ಉತ್ಪಾದನೆ ಮಾಡೋಕೆ ಆಗದೇ ಇದ್ದರೆ ನಾವೇನು ನೇಣು ಹಾಕಿಕೊಳ್ಳೋದಾ..? ಎಂದು ಪ್ರಶ್ನೆ ಮಾಡಿದ್ದರು. ಸದಾನಂದಗೌಡರ ಈ ಮಾತು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಡಿ.ವಿ. ಸದಾನಂದಗೌಡರ ಈ ವಿವಾದ ವಿಪಕ್ಷಗಳ ಟೀಕೆಗೆ ಆಹಾರವಾಗಿರೋದ್ರ ಬೆನ್ನಲ್ಲೇ ಇದೀಗ ಡಿವಿಎಸ್​ ಪಕ್ಷದ ಕಾರ್ಯಕರ್ತನ ಜೊತೆಗೆ ಮಾತನಾಡುತ್ತಿರುವ ಮತ್ತೊಂದು ಆಡಿಯೋ ವೈರಲ್​ ಆಗಿದೆ. ರಾಜ್ಯಕ್ಕೆ ವಿಶೇಷ ಪ್ಯಾಕೇಜ್​ ನೀಡುವ ಬಗ್ಗೆ ಪಕ್ಷದ ಕಾರ್ಯಕರ್ತ ಕೇಳಿದ ಪ್ರಶ್ನೆಗೆ ಸದಾನಂದ ಗೌಡ ನನಗೂ ರಾಜ್ಯಕ್ಕೂ ಸಂಬಂಧವೇ ಇಲ್ಲ ಎಂಬಂತೆ ಮಾತನಾಡಿದ್ದಾರೆ.

ಕರಾವಳಿಯ ಸ್ಥಳೀಯ ಭಾಷೆ ತುಳುವಿನಲ್ಲಿರುವ ವಿಡಿಯೋ ಇದಾಗಿದ್ದು ಇದರಲ್ಲಿ ಪಕ್ಷದ ಕಾರ್ಯಕರ್ತ ಪ್ರಕಾಶ್​ ರೈ ರಾಜ್ಯದ ಕಷ್ಟ ಹೇಳಿ ಪ್ಯಾಕೇಜ್​ ನೀಡಲು ಯಾಕೆ ಹಿಂದೇಟು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಸದಾನಂದ ಗೌಡ, ನಾನು ಕೇಂದ್ರ ಸಚಿವ ನನ್ನ ಬಳಿ ಕೇಳಿದ್ರೆ ನಾನು ಏನು ಮಾಡಲಿ..? ಪ್ಯಾಕೇಜ್​ ಬಗ್ಗೆ ನೀವು ರಾಜ್ಯಾಧ್ಯಕ್ಷರು ಹಾಗೂ ಸಿಎಂ ಬಳಿ ಹೋಗಿ ಕೇಳಿ. ನಾವೆಲ್ಲ ಕೇಂದ್ರದ ನಾಯಕರು. ಕೇಂದ್ರ ಸರ್ಕಾರದಿಂದ ಏನನ್ನ ನೀಡಬೇಕೋ ಅದನ್ನೆಲ್ಲ ನೀಡಿ ಆಗಿದೆ ಎಂದು ಹೇಳಿದ್ದಾರೆ.

ರಾಜ್ಯದ ಸಮಸ್ಯೆಯನ್ನ ರಾಜ್ಯದ ನಾಯಕರೇ ಸುಧಾರಿಸಬೇಕು. ಪ್ಯಾಕೇಜ್​ ಬೇಕು ಎಂದಾದರೆ ನಿಮ್ಮ ಶಾಸಕರು ಹಾಗೂ ಮಂತ್ರಿಗಳ ಬಳಿ ಹೋಗಿ ಕೇಳಿಕೊಳ್ಳಿ. ನೀವು ಯಾರ ಬಳಿ ಹೋಗಿ ಪ್ಯಾಕೇಜ್​​ ಕೇಳಬೇಕೋ ಅವರ ಬಳಿ ಹೋಗಿ ಕೇಳಿ ಎಂದು ಆಡಿಯೋ ಸಂಭಾಷಣೆಯಲ್ಲಿ ಡಿವಿಎಸ್​ ಹೇಳಿದ್ದಾರೆ. ಈ ಆಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದು, ಸದಾನಂದ ಗೌಡರ ಬೇಜವಾಬ್ದಾರಿ ಮಾತಿನ ವಿರುದ್ಧ ಆಕ್ರೋಶ ವ್ಯಕ್ತವಾಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...