alex Certify ಸಿದ್ಧರಾಮಯ್ಯರೊಂದಿಗೆ 64 ಶಾಸಕರು, ಡಿ.ಕೆ. ಶಿವಕುಮಾರ್ ಜತೆ ಒಬ್ರೇ ಒಬ್ರು: ಮುನಿರತ್ನ ಟಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿದ್ಧರಾಮಯ್ಯರೊಂದಿಗೆ 64 ಶಾಸಕರು, ಡಿ.ಕೆ. ಶಿವಕುಮಾರ್ ಜತೆ ಒಬ್ರೇ ಒಬ್ರು: ಮುನಿರತ್ನ ಟಾಂಗ್

ಬೆಂಗಳೂರು: ಆರ್.ಆರ್. ನಗರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಪ್ರಚಾರ ರಂಗೇರಿದ್ದು, ನಾಯಕರ ವಾಕ್ಸಮರ ಕೂಡ ಜೋರಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿ ಸಿದ್ಧರಾಮಯ್ಯ ಜೊತೆಗೆ 64 ಶಾಸಕರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆಗೆ ಕುಣಿಗಲ್ ಶಾಸಕ ರಂಗನಾಥ್ ಮಾತ್ರ ಇದ್ದಾರೆ ಎಂದು ಆರ್.ಆರ್. ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ.

ಸಿದ್ಧರಾಮಯ್ಯ ನಾಯಕತ್ವ ಬೇಕೆಂದು ಶಾಸಕರು ಹೇಳುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ನಾಯಕತ್ವ ಬೇಕೆಂದು ಒಬ್ಬರೂ ಹೇಳುತ್ತಿಲ್ಲ. ಸಿದ್ಧರಾಮಯ್ಯರೊಂದಿಗೆ 64 ಮಂದಿ ಶಾಸಕರಿದ್ದು, ಡಿ.ಕೆ. ಶಿವಕುಮಾರ್ ಜೊತೆ ಒಬ್ಬರು ಶಾಸಕರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಡಿಕೆಶಿಯವರ ಈಗಿನ ಪರಿಸ್ಥಿತಿ ಇದು ಎಂದು ಕಾಲೆಳೆದಿದ್ದಾರೆ.

ಮುನಿರತ್ನ ಹೇಳಿಕೆ ಪ್ರತಿಕ್ರಿಯೆ ನೀಡಿ ಡಿ.ಕೆ. ಶಿವಕುಮಾರ್, ನಾವೆಲ್ಲ ಶಾಸಕಾಂಗ ಪಕ್ಷದ ನಾಯಕರ ಜೊತೆಗೆ ಇದ್ದೇವೆ. ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ಬರಲಿ. ಮುಖ್ಯಮಂತ್ರಿ ಯಾರೆಂದು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...