ಬೆಂಗಳೂರು: ಜನ್ಮದಿನಕ್ಕೆ ವಿಶ್ ಮಾಡಲು ಯಾರು ಬರಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
ಮೇ 15 ರಂದು ತಮ್ಮ ಜನ್ಮದಿನವಿದ್ದು, ಮೇ 14 ರಿಂದ ಮೂರು ದಿನ ಬೆಂಗಳೂರಿನಲ್ಲಿ ಇರುವುದಿಲ್ಲ. ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರು, ಕನಕಪುರ ಕ್ಷೇತ್ರದ ಜನ ಮತ್ತು ಅಭಿಮಾನಿಗಳು ಸೇರಿದಂತೆ ಯಾರೂ ಕೂಡ ಶುಭಾಶಯ ಕೋರಲು ಸದಾಶಿವನಗರದ ಮನೆಗೆ ಮತ್ತು ಪಕ್ಷದ ಕಚೇರಿಗೆ ಬರಬಾರದು ಎಂದು ಮನವಿ ಮಾಡಿದ್ದಾರೆ.
ಕಾರಣಾಂತರದಿಂದ ಮೇ 14 ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಇರುವುದಿಲ್ಲ. ಯಾರೂ ವಿಶ್ ಮಾಡಲು ಬರಬಾರದು. ಇದನ್ನು ತಪ್ಪಾಗಿ ಭಾವಿಸಬಾರದು ಎಂದು ಮನವಿ ಮಾಡಿದ್ದಾರೆ.