alex Certify ಕೋವಿಡ್ ಟೆಸ್ಟ್ ನಿಂದ ಆತಂಕ, ಮನೆ ತೊರೆಯುತ್ತಿರುವ ಜನ – ಆದೇಶ ಹಿಂಪಡೆಯಲು ಆಡಳಿತ ಪಕ್ಷದ ಶಾಸಕ ಆಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಟೆಸ್ಟ್ ನಿಂದ ಆತಂಕ, ಮನೆ ತೊರೆಯುತ್ತಿರುವ ಜನ – ಆದೇಶ ಹಿಂಪಡೆಯಲು ಆಡಳಿತ ಪಕ್ಷದ ಶಾಸಕ ಆಗ್ರಹ

ಕೊರೋನಾ ರ್ಯಾಂಡಮ್ ಟೆಸ್ಟಿಂಗ್ ಕೈಬಿಡುವಂತೆ ಸರ್ಕಾರಕ್ಕೆ ಮಾಜಿ ಸಚಿವ ಉಮೇಶ್ ಕತ್ತಿ ಒತ್ತಾಯಿಸಿದ್ದಾರೆ. ಮನೆಮನೆಗೆ ತೆರಳಿ ಕೋವಿಡ್-19 ಟೆಸ್ಟಿಂಗ್ ಮಾಡುವುದನ್ನು ಕೈಬಿಡಬೇಕು ಎಂದು ಹೇಳಿದ್ದಾರೆ.

ಸರ್ಕಾರ ಟಾರ್ಗೆಟ್ ನೀಡಿರುವುದನ್ನು ಕೈಬಿಡಬೇಕು. ಟೆಸ್ಟ್ ಗಾಗಿ ಬಂದವರಿಗೆ ಮಾತ್ರ ಟೆಸ್ಟ್ ಮಾಡಬೇಕು. ಕೋವಿಡ್ ಟೆಸ್ಟ್ ನಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಭಯಭೀತರಾದ ಜನ ಮನೆಗಳನ್ನು ಬಿಟ್ಟು ಹೋಗುತ್ತಿದ್ದಾರೆ. ಸರ್ಕಾರದ ಆದೇಶದಿಂದ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂದು ದೂರಿದ್ದಾರೆ.

ಆರೋಗ್ಯ ಇಲಾಖೆಯ ಸಿಬ್ಬಂದಿ ಮೇಲೆ ಅಧಿಕಾರಿಗಳಿಂದ ಒತ್ತಡ ಹೆಚ್ಚಾಗಿದೆ. ಮನೆಮನೆಗೆ ತೆರಳಿ ಟೆಸ್ಟ್ ಮಾಡುವ ಆದೇಶವನ್ನು ಹಿಂಪಡೆಯಬೇಕು. ರಾಜ್ಯ ಸರ್ಕಾರ ಶೀಘ್ರದಲ್ಲೇ ಆದೇಶವನ್ನು ಹಿಂಪಡೆಯಬೇಕು ಎಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಶಾಸಕ ಉಮೇಶ್ ಕತ್ತಿ ಒತ್ತಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...