ಕೊಪ್ಪಳ: ಪುರಾಣದ ಸಾವಿನ ರಾಜ ‘ಯಮ’ ಕರೋನಾ ಕಾಲದಲ್ಲಿ ರಸ್ತೆಗಿಳಿದಿದ್ದಾನೆ. ಕಂಡ ಕಂಡವರನ್ನು ತನ್ನ ಪಾಶ ಬಳಸಿ ಎತ್ತಿಹಾಕಿಕೊಂಡು ಹೋಗುತ್ತಿದ್ದಾನೆ.
ಕೊಪ್ಪಳದಲ್ಲಿ ಈ ಸನ್ನಿವೇಶ ಕಂಡುಬಂತು. ಬಂದವ ಮಾತ್ರ ಯಮನಲ್ಲ. ಯಮನ ಪಾತ್ರಧಾರಿ ಪೊಲೀಸ್ ಸಿಬ್ಬಂದಿ. ಕರೋನಾದಿಂದ ಬಚಾವಾಗಲು ಮನೆಯಿಂದ ಹೊರ ಬರಬೇಡಿ ಎಂದು ಸಾರಿ, ಸಾರಿ ಹೇಳಿ ಪೊಲೀಸರು ಸೋತಿದ್ದಾರೆ.
ಈಗ ಜನರಿಗೆ ಅರ್ಥ ಮಾಡಿಸಲು ಹಲವು ರೀತಿಯಲ್ಲಿ ಸಾಹಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಕರೋನಾ ವೈರಸ್ ಮಾದರಿಯ ಟೋಪಿ ಹಾಕಿ ಜನರನ್ನು ಬೆದರಿಸುವ ಸ್ಕಿಟ್ ನ್ನು ರಸ್ತೆಯಲ್ಲಿ ಪೊಲೀಸರು ಪ್ರದರ್ಶಿಸಿ ಜಾಗೃತಿ ಮೂಡಿಸಿದ್ದರು. ಕೊಪ್ಪಳ ಪೊಲೀಸರು ಯಮರಾಜನ ಪಾತ್ರ ಸೃಷ್ಟಿ ಮಾಡಿದ್ದರು. ಎಮ್ಮೆಯೂ ಇತ್ತು. ಬೈಕ್ ಸವಾರರಿಗೆ ಪಾಶ ಹಾಕಿ ಹಿಡಿದು ಹೆದರಿಸಲಾಯಿತು. ಮನೆಯಿಂದ ಸುಮ್ಮನೇ ಹೊರಗೆ ಬರಬೇಡಿ ಎಂದು ಎಚ್ಚರಿಸಲಾಯಿತು.