alex Certify ಬಿಗ್ ನ್ಯೂಸ್: ಶೀಘ್ರವೇ ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಸಿದ್ಧತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ಶೀಘ್ರವೇ ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಸಿದ್ಧತೆ

ಸಂಪುಟ ವಿಸ್ತರಣೆ : ಖಾತೆ ಹಂಚಿಕೆ ಪಟ್ಟಿ ...

ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಸಾಕಷ್ಟು ಚರ್ಚೆಗಳು ಬಿಜೆಪಿ ಪಕ್ಷದಲ್ಲಿ ನಡೆಯುತ್ತಿವೆ. ಅತ್ತ ಹಿರಿಯ ನಾಯಕರು ಸಚಿವ ಆಕಾಂಕ್ಷಿಯಾಗಿದ್ದರೆ, ಇತ್ತ ವಲಸಿಗರಲ್ಲಿಯೂ ಆಕಾಂಕ್ಷಿಗಳು ಇದ್ದಾರೆ. ಇವರೆಲ್ಲರನ್ನೂ ಸರಿದೂಗಿಸುವ ಕೆಲಸ ಸಿಎಂ ಕೈಲಿದೆ. ಹೀಗಾಗಿ ಅಧಿವೇಶನಕ್ಕೂ ಮುನ್ನವೇ ಸಿಎಂ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆ ಎನ್ನಲಾಗುತ್ತಿದೆ.

ಇನ್ನು ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಸಿಎಂ ಆದಷ್ಟು ಬೇಗ ದೆಹಲಿಗೆ ಹೋಗಲಿದ್ದಾರೆ ಎನ್ನುತ್ತಿವೆ ಮೂಲಗಳು. ಆದರೆ ಸಚಿವ ಸಂಪುಟ ವಿಸ್ತರಣೆ ಕಾರಣವನ್ನಿಟ್ಟುಕೊಂಡು ಹೋಗುವುದಿಲ್ಲ. ರಾಜ್ಯದ ಪ್ರಸ್ತುತ ವಿದ್ಯಾಮಾನಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಎನ್ನಲಾಗುತ್ತಿದೆ. ರಾಜ್ಯದ ಪರಿಸ್ಥಿತಿಯೊಂದು ನೆಪ ಅಷ್ಟೆ. ಆದರೆ ಮುಖ್ಯವಾಗಿ ಸಚಿವ ಸಂಪುಟದ ಬಗ್ಗೆಯೇ ಚರ್ಚೆ ಮುಖ್ಯವಾಗಿದೆ ಎನ್ನುವ ಮಾತುಗಳು ಪಕ್ಷದಲ್ಲಿ ಕೇಳಿ ಬರುತ್ತಿವೆ.

ಇತ್ತ ಹಲವಾರು ಮಂದಿ ಸಚಿವಾಕಾಂಕ್ಷಿಗಳು ಸಿಎಂ ದೆಹಲಿಗೆ ಹೋಗುವುದನ್ನು ಎದುರು ನೋಡುತ್ತಿದ್ದಾರೆ. ಈಗಾಗಲೇ ಸಚಿವಾಕಾಂಕ್ಷಿಗಳು ಅನೇಕ ಮಂದಿ ಸಿಡಿದೆದ್ದಿದ್ದು ಗೊತ್ತೇ ಇದೆ. ಹೀಗಾಗಿ ಅದ್ಯಾರ‍್ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಇಲ್ಲಿ ಮುಖ್ಯವಾಗಿದೆ. ಇದರ ಜೊತೆಗೆ ಡಿಜೆ ಹಾಗೂ ಕೆ.ಜೆ. ಹಳ್ಳಿ ಗಲಭೆ ವಿಚಾರದ ಬಗ್ಗೆಯು ವರಿಷ್ಠರ ಜೊತೆ ಮಾತನಾಡಲಿದ್ದಾರಂತೆ ಸಿಎಂ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...