alex Certify ಪೊಲೀಸ್ ದಾಳಿ: ಬಕ್ರೀದ್ ಗೆ ಬಲಿಕೊಡಲು ತಂದಿದ್ದ ಒಂಟೆಗಳ ವಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್ ದಾಳಿ: ಬಕ್ರೀದ್ ಗೆ ಬಲಿಕೊಡಲು ತಂದಿದ್ದ ಒಂಟೆಗಳ ವಶ

ಕೋಲಾರ ಜಿಲ್ಲೆ ಕೆಜಿಎಫ್ ನಗರದ ಬಾಲಕೃಷ್ಣ ಬಡಾವಣೆಯಲ್ಲಿ ಬಕ್ರೀದ್ ಹಬ್ಬಕ್ಕೆ ಬಲಿಕೊಡಲು ತಂದಿದ್ದ 2 ಒಂಟೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಫಾಸಿಲ್ ಎಂಬಾತನಿಗೆ ಸೇರಿದ ಒಂಟೆಗಳನ್ನು ಮದೀನ ಮಸೀದಿ ಬಳಿ ಇರಿಸಲಾಗಿದ್ದು, ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಒಂಟೆಗಳನ್ನು ವಶಕ್ಕೆ ಪಡೆದು ಮಾಲೂರಿನ ಗೋಶಾಲೆಗೆ ಕಳುಹಿಸಲಾಗಿದೆ.

ಬಕ್ರಿದ್ ಹಬ್ಬದ ಸಂದರ್ಭದಲ್ಲಿ ಒಂಟೆ ಮಾಂಸ ದಾನ ಮಾಡಲಾಗುತ್ತದೆ ಎನ್ನಲಾಗಿದ್ದು, ಜಿಲ್ಲಾಡಳಿತದಿಂದ ಹಸು, ಒಂಟೆ ಬಲಿ ಕೊಡಲು ನಿಷೇಧ ಹೇರಲಾಗಿದೆ. ಬಲಿ ಕೊಡಲು ತಂದಿದ್ದ 2 ಒಂಟೆಗಳನ್ನು ವಶಕ್ಕೆ ಪಡೆದ ಪೊಲೀಸರು ಗೋಶಾಲೆಗೆ ಕಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...