alex Certify BREAKING NOW: ಗ್ರೀನ್‌ ಝೋನ್‌ ನಲ್ಲಿದ್ದ ಶಿವಮೊಗ್ಗ ಜಿಲ್ಲೆ ಜನತೆಗೆ ಬಿಗ್ ಶಾಕ್ – ಒಂದೇ ದಿನ 8 ಕೊರೊನಾ ಪಾಸಿಟಿವ್‌ ಕೇಸ್ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NOW: ಗ್ರೀನ್‌ ಝೋನ್‌ ನಲ್ಲಿದ್ದ ಶಿವಮೊಗ್ಗ ಜಿಲ್ಲೆ ಜನತೆಗೆ ಬಿಗ್ ಶಾಕ್ – ಒಂದೇ ದಿನ 8 ಕೊರೊನಾ ಪಾಸಿಟಿವ್‌ ಕೇಸ್ ಪತ್ತೆ

ಇದುವರೆಗೂ ಗ್ರೀನ್‌ ಝೋನ್‌ ನಲ್ಲಿದ್ದ ಶಿವಮೊಗ್ಗ ಜಿಲ್ಲೆಯ ಜನತೆಗೆ ಇಂದು ಶಾಕಿಂಗ್‌ ನ್ಯೂಸ್‌ ಸಿಕ್ಕಿದೆ. ಇದುವರೆಗೂ ಒಂದೇ ಒಂದು ಕೊರೊನಾ ಪಾಸಿಟಿವ್‌ ಕೇಸ್‌ ಇಲ್ಲವೆಂದು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದವರು ಈಗ ಕಂಗಾಲಾಗುವಂತೆ ಮಾಡಿದೆ.

ಅಹ್ಮದಾಬಾದ್‌ ನಿಂದ ಬಂದಿದ್ದ 8 ಮಂದಿಗೆ ಕೊರೊನಾ ಪಾಸಿಟಿವ್‌ ರಿಪೋರ್ಟ್‌ ಬಂದಿದೆ ಎನ್ನಲಾಗಿದ್ದು, ಇವರುಗಳಿಗೆ ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣದಲ್ಲಿ ಪರೀಕ್ಷೆ ನಡೆಸಿ ಬಳಿಕ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು.

ಈಗ ಕೊರೊನಾ ಪಾಸಿಟಿವ್‌ ಆಗಿರುವವರ ಟ್ರಾವೆಲ್‌ ಹಿಸ್ಟರಿ ಕಲೆ ಹಾಕುವ ಕಾರ್ಯ ನಡೆಯುತ್ತಿದ್ದು, ಅಹ್ಮದಾಬಾದ್‌ ನಿಂದ ಶಿವಮೊಗ್ಗಕ್ಕೆ ಬರುವ ಸಂದರ್ಭದಲ್ಲಿ ಎಲ್ಲಾದರೂ ಮಧ್ಯೆ ಇಳಿದು ಇತರೆಯವರ ಸಂಪರ್ಕಕ್ಕೆ ಬಂದಿದ್ದರೆ ಎಂಬುದರ ಕುರಿತು ಪರಿಶೀಲನೆ ನಡೆಯುತ್ತಿದೆ.

ಸಚಿವ ಕೆ.ಎಸ್.‌ ಈಶ್ವರಪ್ಪ ಈ ವಿಷಯವನ್ನು ಖಚಿತಪಡಿಸಿದ್ದು, ಇದುವರೆಗೂ ಕೊರೊನಾ ಮಲೆನಾಡಿಗೆ ಕಾಲಿಟ್ಟಿರಲಿಲ್ಲ. ಇದೀಗ 8 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...