ಬೆಂಗಳೂರು: ಮೇ 18ರ ನಂತರ ಲಾಕ್ಡೌನ್ 4.0 ಆರಂಭವಾಗಲಿದ್ದು ನಾಲ್ಕನೇ ಹಂತದ ಲಾಕ್ಡೌನ್ ನಲ್ಲಿ ಹೆಚ್ಚಿನ ನಿರ್ಬಂಧಗಳಿರುವುದಿಲ್ಲ. ಬಹುತೇಕ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಲಿದ್ದು, ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಬಹುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುಳಿವು ನೀಡಿದ್ದಾರೆ.
ಫೈವ್ ಸ್ಟಾರ್ ಹೋಟೆಲ್ ಗಳನ್ನು ಹೊರತುಪಡಿಸಿ ಉಳಿದವುಗಳ ಮೇಲಿನ ನಿರ್ಬಂಧ ತೆಗೆಯಬಹುದು. ಅಲ್ಲಿಯವರೆಗೂ ಕಾದು ನೋಡೋಣ ಎಂದು ಸಿಎಂ ತಿಳಿಸಿದ್ದಾರೆ.
ಅದೇ ರೀತಿ ಹೋಟೆಲ್ ಗಳಲ್ಲಿ ಸೇವೆ ಆರಂಭಿಸಲು ಮತ್ತು ಫಿಟ್ನೆಸ್ ಸೆಂಟರ್, ಗಾಲ್ಫ್ ಕ್ಲಬ್, ಸಲೂನ್ ತೆರೆಯಲು ಅವಕಾಶ ನೀಡುವ ಸುಳಿವನ್ನು ನೀಡಿದ್ದಾರೆ. ಮೇ 17 ರ ನಂತರ ರಾಜ್ಯದಲ್ಲಿ ಲಾಕ್ಡೌನ್ ಮತ್ತಷ್ಟು ಸಡಿಲಗೊಳಿಸಲು ಸರ್ಕಾರ ಮುಂದಾಗಿದೆ. ಹೋಟೆಲ್, ಜಿಮ್, ಗಾಲ್ಫ್ ಕೋರ್ಸ್ ಗಳನ್ನು ತೆರೆಯಲು ಕೇಂದ್ರಸರ್ಕಾರವನ್ನು ಕೋರಿದೆ. ಈ ನಡುವೆ ಬಿಎಂಟಿಸಿ ಬಸ್ ಸಂಚಾರ ಆರಂಭಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ಹೇಳಲಾಗಿದೆ.