alex Certify BIG NEWS: ‘ಸಿಡಿ’ ಹಿಂದಿರುವ ಇಬ್ಬರು ನಾಯಕರು ಯಾರು….? ಶಾಸಕ ಯತ್ನಾಳ್ ಹೇಳಿದ್ದೆನು…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಸಿಡಿ’ ಹಿಂದಿರುವ ಇಬ್ಬರು ನಾಯಕರು ಯಾರು….? ಶಾಸಕ ಯತ್ನಾಳ್ ಹೇಳಿದ್ದೆನು…..?

ವಿಜಯಪುರ: ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ರಾಜಕೀಯವಾಗಿ ಮುಗಿಸುವ ನಿಟ್ಟಿನಲ್ಲಿ ವ್ಯವಸ್ಥಿತ ಸಂಚು ನಡೆದಿದೆ. ಸಿಡಿ ಪ್ರಕರಣದ ಮೂಲಕ ಅವರನ್ನು ಹಣಿಸಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಸಿಡಿ ಪ್ರಕರಣದ ಹಿಂದೆ ಕಾಂಗ್ರೆಸ್ ಹಾಗೂ ಬಿಜೆಪಿಯ ಇಬ್ಬರು ಉನ್ನತ ನಾಯಕರಿದ್ದಾರೆ. ಈ ಇಬ್ಬರು ನಾಯಕರಿಂದಲೇ ಸಿಡಿ ಷಡ್ಯಂತ್ರ ನಡೆದಿದೆ. ಇನ್ನು ಯುವತಿಯ ಮೊದಲ ವಿಡಿಯೋದಲ್ಲಿ ಬೀದರ್ ಭಾಷೆ ಇದೆ. ನಿನ್ನೆ ಬಿಡುಗಡೆಯಾದ ವಿಡಿಯೋದಲ್ಲಿ ಸುಪೀರಿಯರ್ ಕನ್ನಡ ಭಾಷೆ ಇದೆ. ನಿನ್ನೆ ದೂರು ನೀಡಿದ ಕೆಲ ಹೊತ್ತಲ್ಲೇ ಯುವತಿಯ ವಿಡಿಯೋ ಹೇಳಿಕೆ ಬಿಡುಗಡೆಯಾಗಿದೆ. ಒಟ್ಟಾರೆ ಇಡೀ ಸಿಡಿ ಪ್ರಕರಣ ಪಕ್ಕಾ ಪ್ಲಾನ್ ಎಂದು ಆರೋಪಿಸಿದರು.

ಮೆಟ್ರೋ ಮ್ಯಾನ್’ಗೆ ಬಿಜೆಪಿ ಟಿಕೆಟ್, ಪಾಲಕ್ಕಾಡ್ ನಿಂದ ಶ್ರೀಧರನ್ ಸ್ಪರ್ಧೆ

ಇನ್ನು ಸಿಡಿ ಪ್ರಕರಣವನ್ನು ಎಸ್ ಐ ಟಿಗೆ ವಹಿಸಲಾಗಿದೆ. ಎಷ್ಟರ ಮಟ್ಟಿಗೆ ಪಾರದರ್ಶಕವಾಗಿ ತನಿಖೆ ನಡೆಯುತ್ತೆ ಎಂಬುದು ಗೊತ್ತಿಲ್ಲ. ಕಾರಣ ಎಸ್ ಐ ಟಿ ಓರ್ವ ಅಧಿಕಾರಿ ವಿಜಯೇಂದ್ರ ಪರಮಾಪ್ತ. ಎಸ್ ಐ ಟಿಯಿಂದ ನಡೆಯುವ ಯಾವುದೇ ಕೇಸ್ ತಾರ್ಕಿಕ ಅಂತ್ಯ ಕಂಡಿಲ್ಲ. ಡ್ರಗ್ಸ್ ಕೇಸ್, ಯುವರಾಜನ ಕೇಸ್ ಎಲ್ಲವೂ ಫೇಲ್ ಆಯ್ತು. ಹಾಗಾಗಿ ಸಿಡಿ ಪ್ರಕರಣವನ್ನು ಎಸ್ ಐ ಟಿ ಬದಲು ಸಿಬಿಐಗೆ ವಹಿಸಬೇಕಿತ್ತು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...