alex Certify BIG NEWS: ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದ ಸಿ.ಟಿ. ರವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದ ಸಿ.ಟಿ. ರವಿ

ಚಿಕ್ಕಮಗಳೂರು: ಹನುಮ ಹುಟ್ಟಿದ ದಿನಾಂಕ ಗೊತ್ತಾ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿಕಾರಿರುವ ಬಿಜೆಪಿ ರಾಷ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಿದ್ದರಾಮಯ್ಯನವರಿಗೆ ಅನುಮಾನದ ಕಾಯಿಲೆಯಿದೆ, ಎಲ್ಲವನ್ನೂ ಅನುಮಾನಿಸುವ ಪ್ರವೃತ್ತಿ. ಅದು ಅವರ ದೋಷ ಎಂದು ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಮಕ್ಕಳಿಗೆ ಇವರೇ ನಿಮ್ಮ ತಂದೆ-ತಾಯಿ ಎಂದು ಹೇಳಿದ್ರೆ ನಂಬುತ್ತಾರೆ ಹೊರತು ಯಾವ ಮಕ್ಕಳೂ ಅದಕ್ಕೆ ಸಾಕ್ಷ್ಯ ಕೇಳಲ್ಲ. ಆದರೆ ಕೆಲವರು ಸಾಕ್ಷ್ಯ ಕೇಳುವ ಮನಸ್ಥಿತಿ ಹೊಂದಿದ್ದಾರೆ. ಸಿದ್ದರಾಮಯ್ಯ ಅಂತಹ ಮನಸ್ಥಿತಿ ಹೊಂದಿದವರು. ಎಲ್ಲವನ್ನೂ ಅನುಮಾನದ ದೃಷ್ಟಿಯಿಂದಲೇ ನೋಡುತ್ತಾರೆ ಎಂದು ಗುಡುಗಿದರು.

ನಂಬಿಕೆ ಎಂಬುದು ಎಲ್ಲವನ್ನೂ ಮೀರಿದ್ದು, ನಂಬಿಕೆ ಇದ್ದರೆ ಕೆಲವರಿಗೆ ದೇವರು ಕೂಡ ಕಾಣುತ್ತಾನೆ. ನೋಡುವ ದೃಷ್ಟಿಯಿರುವವರಿಗೆ ಭಗವಂತನನ್ನು ತೋರಿಸಬಹುದು. ನಂಬಿಕೆಯಿಲ್ಲದವರಿಗೆ, ನೋಡುವ ಮನಸ್ಸೂ ಇಲ್ಲದವರಿಗೆ ದೇವರನ್ನು ಕಾಣಿಸಲು ಆಗದು ಎಂದು ಟಾಂಗ್ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...