ಬೆಂಗಳೂರಿಗೆ ಹೊಂಗಸಂದ್ರದ ಸ್ಲಂ ನಿವಾಸಿ ಬಿಹಾರಿ ಕಾರ್ಮಿಕ ದೊಡ್ಡ ತಲೆನೋವಾಗಿದ್ದಾನೆ. ಆತನಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಅವನ ಸಂಪರ್ಕಕ್ಕೆ ಬಂದ 165 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಹೊಂಗಸಂದ್ರವನ್ನು ಸೀಲ್ ಡೌನ್ ಮಾಡಲಾಗಿದೆ.
ಬಿಹಾರಿ ಕಾರ್ಮಿಕನ ಟ್ರಾವೆಲ್ ಹಿಸ್ಟರಿ ಭಯಾನಕವಾಗಿದೆ. ಅಲ್ಲಿದ್ದ ಬಿಹಾರಿಗಳೆಲ್ಲ ಒಂದಾಗಿ ಎಲ್ಲ ಕೆಲಸ ಮಾಡ್ತಿದ್ದರಂತೆ. ಒಟ್ಟಿಗೆ ಅಡುಗೆ ಮಾಡ್ತಿದ್ದ ಅವರು ಅದನ್ನು ಬೇಕರಿ ಹಾಗೂ ಅಂಗಡಿಗಳಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಬಿಬಿಎಂಪಿ ಅದ್ರ ಪತ್ತೆ ಕಾರ್ಯ ಶುರು ಮಾಡಿದೆ. ಹೊಂಗಸಂದ್ರ ಪ್ರದೇಶಕ್ಕೆ ರಾಸಾಯನಿಕ ಸಿಂಪಡಿಸಲಾಗ್ತಿದೆ. ಎಲ್ಲರ ಪರೀಕ್ಷೆ ನಡೆಯುತ್ತಿದೆ. ಸುತ್ತಮುತ್ತಲ ಜನರು ಭಯಗೊಂಡಿದ್ದಾರೆ.
ಬಿಹಾರಿ ಕಾರ್ಮಿಕ ಅನೇಕ ಕಡೆ ಓಡಾಡಿದ್ದಾನೆ. ಆತನ ಸಂಪರ್ಕದಲ್ಲಿದ್ದ 9 ಮಂದಿಗೆ ಸೋಂಕಿರುವುದು ದೃಢಪಟ್ಟಿದೆ. ಈತ ಹೋಗಿದ್ದ ಮೂರು ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ. ಆದ್ರೆ ಈತನಿಗೆ ಸೋಂಕು ಬಂದಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.