ಮುಂಬೈನಿಂದ ಮರಳಿದ್ದ ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ ತಾಲೂಕಿನ ಕಡಂದಲೆ ಗ್ರಾಮದ ವ್ಯಕ್ತಿಯೊಬ್ಬರೂ ಕ್ವಾರಂಟೈನ್ ನಲ್ಲಿರುವಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಧನಂಜಯ ಪೂಜಾರಿ ಎಂದು ಹೇಳಲಾಗಿದ್ದು, ಮುಂಬೈನಿಂದ ಹಿಂದಿರುಗಿದ್ದ ಹಿನ್ನೆಲೆಯಲ್ಲಿ ಇವರನ್ನು ಕಡಂದಲೆ ಗ್ರಾಮದ ಶಾಲೆಯಲ್ಲಿ ಕ್ವಾರಂಟೈನ್ ನಲ್ಲಿರಿಸಲಾಗಿತ್ತು.
ತನಗೆ ಕೊರೊನಾ ಸೋಂಕು ಇರಬಹುದೆಂಬ ಶಂಕೆಯಿಂದ ಧನಂಜಯ ಪೂಜಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದ್ದು, ಸಿಬ್ಬಂದಿ ಸ್ಥಳದಲ್ಲಿರದೆ ನಿರ್ಲಕ್ಷ್ಯ ವಹಿಸಿದರೆ ಎಂಬ ಅನುಮಾನ ಈಗ ಮೂಡಿದೆ.