alex Certify BIG NEWS: ಕಾಂಗ್ರೆಸ್ ನವರಿಗೆ ಇಟಲಿ ಧ್ಯಾನ ಬಿಟ್ಟರೆ ಬೇರೇನೂ ಗೊತ್ತಿಲ್ಲ; ಧ್ಯಾನದ ವಿಚಾರದಲ್ಲೂ ರಾಜಕೀಯ ಸರಿಯಲ್ಲ ಎಂದ ಸಚಿವ ಪ್ರಹ್ಲಾದ್ ಜೋಶಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾಂಗ್ರೆಸ್ ನವರಿಗೆ ಇಟಲಿ ಧ್ಯಾನ ಬಿಟ್ಟರೆ ಬೇರೇನೂ ಗೊತ್ತಿಲ್ಲ; ಧ್ಯಾನದ ವಿಚಾರದಲ್ಲೂ ರಾಜಕೀಯ ಸರಿಯಲ್ಲ ಎಂದ ಸಚಿವ ಪ್ರಹ್ಲಾದ್ ಜೋಶಿ

ಧಾರವಾಡ: ಶಾಲಾ-ಕಾಲೇಜುಗಳಲ್ಲಿ ಧ್ಯಾನ ಕಡ್ಡಾಯಕ್ಕೆ ಕಾಂಗ್ರೆಸ್ ನಾಯಕರ ವಿರೋಧ ವಿಚಾರವಾಗಿ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ನವರಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರದ್ದೇ ಧ್ಯಾನ ಎಂದು ಕಿಡಿಕಾರಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ನಾಯಕರಿಗೆ ಇಟಲಿಯ ಧ್ಯಾನ ಒಂದೇ ಗೊತ್ತು. ಶಾಲೆಗಳಲ್ಲಿ ಇಂಥದ್ದೇ ದೇವರ ಧ್ಯಾನ ಮಾಡಬೇಕು ಎಂದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ಭಗವದ್ಗೀತೆಯನ್ನೂ ವಿರೋಧ ಮಾಡಿದ್ದರು. ಯೋಗಾಸನಕ್ಕೂ ಕಾಂಗ್ರೆಸ್ ನಾಯಕರು ವಿರೋಧ ಮಾಡಿದ್ದರು. ಅದರೆ ಯೋಗವನ್ನು ಜಗತ್ತು ಒಪ್ಪಿದ ಮೇಲೆ ಒಪ್ಪಿಕೊಂಡರು. ಹಿಂದೂ ಪರಂಪರೆ ವಿರೋಧ ಮಾಡುವುದೇ ಅವರ ಕೆಲಸ. ಕಾಂಗ್ರೆಸ್ಸಿಗರು ಆರಾಧನೆ ಮಾಡುವ ದೇವರೇ ಸದ್ಭುದ್ಧಿ ಕೊಡಲಿ. ಧ್ಯಾನದಲ್ಲಿ ಹಿಂದೂತ್ವದ ಪ್ರಶ್ನೆ ಬರಲ್ಲ. ಮಕ್ಕಳಿಗೆ ಏಕಾಗ್ರತೆ ಬರಲಿ ಎಂದು ಧ್ಯಾನ ಜಾರಿ ಮಾಡಲಾಗಿದೆ. ಧ್ಯಾನದ ವಿಚಾರದಲ್ಲೂ ರಾಜಕೀಯ ಸರಿಯಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...