alex Certify BIG NEWS: ಅಧಿಕಾರಿಗಳನ್ನೇ ಯಾಮಾರಿಸಿ ರಾತ್ರೋರಾತ್ರಿ ಬಾಲ್ಯವಿವಾಹ; ಬಾಲಕಿ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಧಿಕಾರಿಗಳನ್ನೇ ಯಾಮಾರಿಸಿ ರಾತ್ರೋರಾತ್ರಿ ಬಾಲ್ಯವಿವಾಹ; ಬಾಲಕಿ ರಕ್ಷಣೆ

ಬಾಗಲಕೋಟೆ: ಕೊರೊನಾ ಲಾಕ್ ಡೌನ್ ನಡುವೆ ಗ್ರಾಮಗಳಲ್ಲಿ ಮತ್ತೆ ಬಾಲ್ಯವಿವಾಹ ಪದ್ಧತಿಗಳು ಹೆಚ್ಚುತ್ತಿವೆ. ಅಧಿಕಾರಿಗಳನ್ನೇ ಯಾಮಾರಿಸಿ ರಾತ್ರೋರಾತ್ರಿ ಬಾಲ್ಯವಿವಾಹ ಮಾಡಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗ್ರಾಮವೊಂದರಲ್ಲಿ ಬೆಳಕಿಗೆ ಬಂದಿದೆ.

ಸಿಖ್ ಲಂಗರ್‌ನಲ್ಲಿ ಚಪಾತಿ ಮಾಡಿದ ಯುವರಾಜ ವಿಲಿಯಂ ದಂಪತಿ

ಗ್ರಾಮದಲ್ಲಿ ಬಾಲ್ಯವಿವಾಹ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಯಾಮಾರಿಸಿದ ಪೋಷಕರು ನಮ್ಮ ಮನೆಯಲ್ಲಿ ಸಾವಾಗಿದೆ. ನಾವೇಕೆ ಈಗ ವಿವಾಹ ಮಾಡಿಸಲಿ ಎಂದು ಹೇಳಿದ್ದರು. ಪೋಷಕರ ಮಾತು ನಂಬಿ ಅಧಿಕಾರಿಗಳು ವಾಪಸ್ ಆಗಿದ್ದರು. ಅಧಿಕಾರಿಗಳು ಮರಳುತ್ತಿದ್ದಂತೆ ಬಾಲಕಿಗೆ ಮದುವೆ ಮಾಡಿ ಬೇರೊಂದು ಮನೆಯಲ್ಲಿ ಬಚ್ಚಿಟ್ಟಿದ್ದರು.

ನಾಯಕತ್ವ ಬದಲಾವಣೆ ಬೆಳವಣಿಗೆ ಬೆನ್ನಲ್ಲೇ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಯಡಿಯೂರಪ್ಪ

ವಿಷಯ ತಿಳಿದ ಅಧಿಕಾರಿಗಳು ಮತ್ತೆ ಗ್ರಾಮಕ್ಕೆ ತೆರಳಿದ್ದಾರೆ. ಬಾಲಕಿಯ ಮೊಬೈಲ್ ಲೊಕೇಷನ್ ಆಧರಿಸಿ ಬಾಲಕಿ ಪತ್ತೆಹಚ್ಚಿ ರಕ್ಷಿಸಿದ್ದಾರೆ. ಸದ್ಯ ಬಾಲಕಿಯನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...