alex Certify ಬೆಂಗಳೂರಲ್ಲಿ ಮತ್ತೆ ಮರುಕಳಿಸಿದ ಘಟನೆ: ಕ್ಷಣಾರ್ಧದಲ್ಲಿ ಸರ ಎಗರಿಸಿ ಸವಾರ ಪರಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಲ್ಲಿ ಮತ್ತೆ ಮರುಕಳಿಸಿದ ಘಟನೆ: ಕ್ಷಣಾರ್ಧದಲ್ಲಿ ಸರ ಎಗರಿಸಿ ಸವಾರ ಪರಾರಿ

ಬೆಂಗಳೂರಿನಲ್ಲಿ ಮತ್ತೆ ಸರಗಳ್ಳರ ಹಾವಳಿ ತಲೆದೋರಿದ್ದು ವೃದ್ಧೆಯ ಸರ ದೋಚಲಾಗಿದೆ. ಸರಗಳ್ಳನಿಂದ ಸರಿಯುವ ಪ್ರಯತ್ನದಲ್ಲಿ ಆಯತಪ್ಪಿ ಬಿದ್ದ ವೃದ್ಧೆ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಯುಧಪೂಜೆ ದಿನ ಸರೋಜಮ್ಮ ಎಂಬುವರು ಪೂಜಾ ಸಾಮಗ್ರಿ ತರಲು ಕೆಂಗೇರಿ ಸಮೀಪದ ವಲಗೇರಹಳ್ಳಿ ಬಳಿ ನಡೆದುಕೊಂಡು ಹೋಗುವಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿ ಕ್ಷಣಾರ್ಧದಲ್ಲಿ ಸರ ಕಸಿದು ಪರಾರಿಯಾಗಿದ್ದಾನೆ.

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸರೋಜಮ್ಮ ಅವರ ಕುತ್ತಿಗೆಯಿಂದ ಸರ ಎಳೆದುಕೊಂಡಿದ್ದು, ಸರೋಜಮ್ಮ ರಸ್ತೆಮೇಲೆ ಆಯತಪ್ಪಿ ಬಿದ್ದಿದ್ದು ಅವರಿಗೆ ತೀವ್ರ ಪೆಟ್ಟಾಗಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ಕೆಂಗೇರಿ ಪೊಲೀಸರು ಸರಗಳ್ಳನ ಬಂಧನಕ್ಕೆ ಬಲೆ ಬೀಸಿದ್ದಾರೆ. ವೃದ್ಧೆಯಿಂದ ಸರ ಕಸಿದು ಕ್ಷಣಾರ್ಧದಲ್ಲಿ ಕಳ್ಳ ಪರಾರಿಯಾಗಿದ್ದು ಅಲ್ಲಿದ್ದವರು ಹಿಡಿಯುವ ಪ್ರಯತ್ನ ನಡೆಸಿದರೂ ಸಫಲವಾಗಿಲ್ಲ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...