alex Certify ಭಿಕ್ಷುಕನ ಗಂಟಿನಲ್ಲಿದ್ದ ಹಣ ಕಂಡು ದಂಗಾದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಿಕ್ಷುಕನ ಗಂಟಿನಲ್ಲಿದ್ದ ಹಣ ಕಂಡು ದಂಗಾದ ಜನ

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬರದಿ ಗ್ರಾಮದಲ್ಲಿ ಭಿಕ್ಷುಕನೊಬ್ಬನ ಬಳಿ ಕಂತೆ ಕಂತೆ ಹಣ ಪತ್ತೆಯಾಗಿದೆ.

ವಿಕಲಚೇತನ ಆಗಿರುವ ರಂಗಸ್ವಾಮಯ್ಯ ಪ್ರತಿದಿನ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾರೆ. ಭಿಕ್ಷೆ ಬೇಡಿದ ಹಣ ಮತ್ತು ಮಾಸಾಶನದ ಹಣವನ್ನು ಕೂಡಿಟ್ಟಿದ್ದ ಅವರ ಬಳಿ 60 ಸಾವಿರ  ರೂಪಾಯಿ ನೋಟಿನ ಕಂತೆಗಳು ಪತ್ತೆಯಾಗಿದೆ.

ಗ್ರಾಮಸ್ಥರು ರಂಗಸ್ವಾಮಯ್ಯನಿಗೆ ಊಟ ಕೊಡುತ್ತಿದ್ದರು. ಆತನ ಬಳಿ ಇದ್ದ ಕೊಳಕು ಬಟ್ಟೆ ಗಂಟು ಎಸೆಯುವ ಸಂದರ್ಭದಲ್ಲಿ ಹಣ ಪತ್ತೆಯಾಗಿದೆ. ಅವರ ಹಣವನ್ನು ಬ್ಯಾಂಕ್ ಖಾತೆಗೆ ಹಾಕಿದ ಗ್ರಾಮಸ್ಥರು ದುರ್ಬಳಕೆ ಆಗುವುದನ್ನು ತಡೆದಿದ್ದಾರೆ. ಅಲ್ಲದೇ ಆತನನ್ನು ಅನಾಥಾಶ್ರಮಕ್ಕೆ ದಾಖಲಿಸಲು ಮುಂದಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...