alex Certify ಕರ್ನಾಟಕದ ಪ್ರಾಕೃತಿಕ ಸೌಂದರ್ಯಕ್ಕೆ ಮಾರು ಹೋದ ರೈಲ್ವೇ ಸಚಿವಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ನಾಟಕದ ಪ್ರಾಕೃತಿಕ ಸೌಂದರ್ಯಕ್ಕೆ ಮಾರು ಹೋದ ರೈಲ್ವೇ ಸಚಿವಾಲಯ

ನಮ್ಮ ದೇಶದಲ್ಲಿ ಪ್ರಕೃತಿ ನಿರ್ಮಿತ ಸೌಂದರ್ಯ ಸಂಪತ್ತಿಗೇನು ಬರಗಾಲವಿಲ್ಲ. ಅರಣ್ಯ ಸಂಪತ್ತಿನ ವಿಹಂಗಮ ನೋಟದ ಸಾಕಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಲೇ ಇರುತ್ತದೆ. ಇದೀಗ ಈ ಸಾಲಿಗೆ ರೈಲ್ವೇ ಸಚಿವಾಲಯ ಮತ್ತೊಂದು ಅಮೋಘ ಫೋಟೋವನ್ನ ಸೇರಿಸಿದೆ.

ರೈಲ್ವೇ ಸಚಿವಾಲಯ ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ರೈಲು ಸುಂದರವಾದ ಕಾನನದ ಮಧ್ಯದಲ್ಲಿ ಹೋಗುತ್ತಿರೋದನ್ನ ಕಾಣಬಹುದಾಗಿದೆ. ಅಂದಹಾಗೆ ಈ ಫೋಟೋವನ್ನು ಉತ್ತರ ಕನ್ನಡ ಜಿಲ್ಲೆಯ ಹರ್ವಾಡಾ ರೈಲ್ವೆ ನಿಲ್ದಾಣದಲ್ಲಿ ಕ್ಲಿಕ್ಕಿಸಲಾಗಿದೆ.

ಈ ಫೋಟೋ ನೋಡಿದ ನೆಟ್ಟಿಗರು ಕಮೆಂಟ್​ ಹಾಗೂ ಲೈಕ್ಸ್​ನ ಸುರಿಮಳೆಯನ್ನೇ ಹರಿಸಿದ್ದಾರೆ. ಕೆಲವರು ಉತ್ತರ ಕನ್ನಡದ ಪ್ರಕೃತಿ ಸೌಂದರ್ಯವನ್ನ ಹಾಡಿ ಹೊಗಳಿದ್ರೆ ಇನ್ನು ಕೆಲವರು ರೈಲುಗಳು ಉಂಟು ಮಾಡುವ ಮಾಲಿನ್ಯದಿಂದ ಈ ಸುಂದರ ಕಾಡಿನ ಮೇಲೆ ಕೆಟ್ಟ ಪರಿಣಾಮ ಬೀರೋದಿಲ್ವಾ ಅಂತಾ ಪ್ರಶ್ನೆ ಮಾಡಿದ್ದಾರೆ. ಅಂದಹಾಗೆ ಈ ಸುಂದರವಾದ ಫೋಟೋ ಬಗ್ಗೆ ನಿಮ್ಮ ಅಭಿಪ್ರಾಯವೇನು..?

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...