ತನ್ನ ಪತ್ನಿಯ ನಡತೆಯಿಂದ ಬೇಸತ್ತ ಪತಿಯೊಬ್ಬ ಘೋರ ಕೃತ್ಯವೆಸಗಿದ್ದಾನೆ. ತನ್ನ ಎಂಟು ವರ್ಷದ ಪುತ್ರಿಗೆ ನೇಣು ಬಿಗಿದು ಹತ್ಯೆ ಮಾಡಿದ್ದಲ್ಲದೆ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಂತಹದೊಂದು ಘಟನೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕಟಮಾನ ದೊಡ್ಡಿ ಗ್ರಾಮದಲ್ಲಿ ನಡೆದಿದ್ದು, ರಾಮಚಂದ್ರ ಎಂಬಾತ ತನ್ನ ಪುತ್ರಿ ವರ್ಷಾಳಿಗೆ ನೇಣು ಬಿಗಿದು ಬಳಿಕ ತಾನೂ ಸಾವಿಗೆ ಶರಣಾಗಿದ್ದಾನೆ.
ಪತ್ನಿಯ ನಡತೆಯಿಂದ ಬೇಸತ್ತಿದ್ದ ರಾಮಚಂದ್ರ ಹಲವು ಬಾರಿ ಆಕೆಗೆ ಬುದ್ಧಿ ಹೇಳಿದ್ದರೂ ತಿದ್ದಿಕೊಂಡಿರಲಿಲ್ಲ ಎನ್ನಲಾಗಿದ್ದು, ಮಂಗಳವಾರ ರಾತ್ರಿ ಇಬ್ಬರ ನಡುವೆ ಮತ್ತೆ ಜಗಳವಾಗಿದೆ. ಬಳಿಕ ಮಗಳೊಂದಿಗೆ ತನ್ನ ಗ್ರಾಮಕ್ಕೆ ತೆರಳಿದ ರಾಮಚಂದ್ರ ಈ ಘೋರ ಕೃತ್ಯವೆಸಗಿದ್ದಾನೆ. ಇದಕ್ಕೂ ಮುನ್ನ ಸೆಲ್ಫಿ ವಿಡಿಯೋ ಮಾಡಿ ರಾಮಚಂದ್ರ ತನ್ನ ನೋವು ತೋಡಿಕೊಂಡಿದ್ದಾನೆ. ಇದೀಗ ಆತನ ಪತ್ನಿ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.