alex Certify ಹಾಸನಾಂಬೆಗೆ ಭಕ್ತನೊಬ್ಬನ ವಿಚಿತ್ರ ಮನವಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಸನಾಂಬೆಗೆ ಭಕ್ತನೊಬ್ಬನ ವಿಚಿತ್ರ ಮನವಿ…!

ಪ್ರತಿ ವರ್ಷ ಹಾಸನಾಂಬೆ ದೇವಸ್ಥಾನದ ಹುಂಡಿ ಎಣಿಕೆ ಸಮಯದಲ್ಲಿ ಚಿತ್ರ ವಿಚಿತ್ರ ಪತ್ರಗಳನ್ನು ನೋಡೋದು ಕಾಮನ್ ಆಗಿ ಬಿಟ್ಟಿದೆ. ಈ ವರ್ಷ ಕೂಡ ಹುಂಡಿ ಎಣಿಕೆ ಕಾರ್ಯದ ವೇಳೆ ಸಿಕ್ಕ ಒಂದು ಮನವಿ ಪತ್ರ ಎಂತವರಿಗೂ ನಗು ತರಿಸುವಂತಿದೆ.

ಹೌದು, ಕುಡುಕನೊಬ್ಬ ದೇವಿ ಹಾಸನಾಂಬೆಯ ಬಳಿ ಒಂದು ಮನವಿ ಪತ್ರ ಇಟ್ಟಿದ್ದಾರೆ. ನಾನು ಬೆಳಗ್ಗೆ ಹಾಗೂ ಮಧ್ಯಾಹ್ನದ ಸಮಯದಲ್ಲಿ ಕುಡಿಯುವುದಿಲ್ಲ. ಇದು ಸತ್ಯ. ಆದರೆ ರಾತ್ರಿ ಸಮಯದಲ್ಲಿ ಕುಡಿದರೆ ದಯವಿಟ್ಟು ನನ್ನನ್ನು ಕ್ಷಮಿಸಿಬಿಡು ಎಂದು ಹೇಳಿದ್ದಾನೆ.

ಇದರ ಜೊತೆಗೆ ಹಲವಾರು ಭಕ್ತರು ಅವರ ಕೋರಿಕೆಗಳನ್ನು ಪತ್ರದ ಮುಖೇನ ಸಲ್ಲಿಸಿದ್ದಾರೆ. ಒಳ್ಳೆಯ ವರ ಕರುಣಿಸು ತಾಯಿ ಎಂದು ಮದುವೆಯಾಗದ ಯುವತಿಯರು ಕೇಳಿದರೆ, ಜಗಳ ಆಡಿರುವ ಗಂಡ ಹೆಂಡತಿಯನ್ನು ಒಂದುಗೂಡಿಸು ಎಂದು ಮತ್ತೊಂದಿಷ್ಟು ಜನ ಕೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...