ಕರ್ನಾಟಕದ ಹಸಿರು ವಲಯದಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮೇ 3ರವರೆಗೆ ಈ ಮಾರ್ಗಸೂಚಿ ಅನ್ವಯಿಸಲಿದೆ. ತಾಲೂಕುವಾರು ಲಾಕ್ ಡೌನ್ ಸಡಿಲಿಕೆಯಾಗಲಿದೆ. ಕೊರೊನಾ ಸೋಂಕು ಇಲ್ಲದ ತಾಲೂಕುಗಳಲ್ಲಿ ಮಾತ್ರ ಲಾಕ್ ಡೌನ್ ಸಡಿಲಿಕೆಯಾಗಲಿದೆ.
ಹಸಿರು ವಲಯದಲ್ಲೂ ಅನೇಕ ಷರತ್ತಿನ ಮೂಲಕ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಹಸಿರು ವಲಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ. ಸಾರ್ವಜನಿಕ ವಾಹನಗಳ ಓಡಾಟವಿಲ್ಲ. ಕಾರು, ಆಟೋ, ಬಸ್ ಸಂಚಾರವಿರುವುದಿಲ್ಲ. ಹಾಗೆ ಯಾವುದೇ ಮಾಲ್, ಜಿಮ್ ಗಳು ಓಪನ್ ಆಗುವಂತಿಲ್ಲ. ಹೆಚ್ಚು ಜನರು ಸೇರುವಂತಹ ಮಳಿಗೆಯಲ್ಲಿರುವ ಅಂಗಡಿಗಳನ್ನು ತೆರೆಯುವಂತಿಲ್ಲ.
ಹಸಿರು ವಲಯದಲ್ಲಿ ಏಕಾಂಗಿಯಾಗಿರುವ ಅಂಗಡಿ, ಕೈಗಾರಿಕೆ ಮಾತ್ರ ಅವಕಾಶ ನೀಡಲಾಗಿದೆ. ಕೈಗಾರಿಕೆಗಳು ಶೇಕಡಾ 50ರಷ್ಟು ಸಿಬ್ಬಂದಿ ಜೊತೆ ಕೆಲಸ ಶುರು ಮಾಡಬಹುದು. ನಗರಸಭೆ, ಪಾಲಿಕೆ ವ್ಯಾಪ್ತಿ ಹಾಗೂ ಗ್ರಾಮೀಣ ಕೈಗಾರಿಕೆಗೆ ಅನುಮತಿ ನೀಡಲಾಗಿದೆ.
ಇನ್ನು ಕಿತ್ತಳೆ ವಲಯದಲ್ಲಿ ಕೊರೊನಾ ಸೋಂಕಿರದ ತಾಲೂಕುಗಳಿಗೆ ಮಾತ್ರ ಕೆಲ ರಿಯಾಯಿತಿ ನೀಡಲಾಗಿದೆ. ಕೆಂಪು ವಲಯಕ್ಕೆ ಈ ಹೊಸ ಮಾರ್ಗಸೂಚಿ ಅನ್ವಯವಾಗುವುದಿಲ್ಲ. ಹಾಸನ, ಶಿವಮೊಗ್ಗ, ಯಾದಗಿರಿ, ಕೊಡಗು ಸೇರಿದಂತೆ ಹಸಿರು ವಲಯದ 14 ಜಿಲ್ಲೆಗಳಿಗೆ ಮಾತ್ರ ರಿಯಾಯಿತಿ ಸಿಗ್ತಿದೆ.