alex Certify ಸಿಡಿಲಿಗೆ ಬಲಿಯಾದ ಮಾವ – ಅಳಿಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಡಿಲಿಗೆ ಬಲಿಯಾದ ಮಾವ – ಅಳಿಯ

ಬುಧವಾರದಂದು ಗುಡುಗು ಸಿಡಿಲು ಸಹಿತ ಸುರಿದ ಮಳೆಗೆ ಮಾವ – ಅಳಿಯ ಬಲಿಯಾಗಿರುವ ಘಟನೆ ಗದಗ ಜಿಲ್ಲೆಯ ಅಬ್ಬಿಗೇರಿಯಲ್ಲಿ ನಡೆದಿದೆ.

ಕೋತಬಾಳ ಗ್ರಾಮದ ನಿವಾಸಿ 30 ವರ್ಷದ ವೆಂಕ್ಲಪ್ಪ ಬಸಪ್ಪ ಪಾಗದ ಅಬ್ಬಿಗೇರಿ ಗ್ರಾಮದಿಂದ ತನ್ನ ಅಕ್ಕನ ಮಗ 7ವರ್ಷದ ಕಿರಣನನ್ನ ಬೈಕಿನಲ್ಲಿ ಕರೆದುಕೊಂಡು ತನ್ನೂರಿಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಮಾರ್ಗಮಧ್ಯದಲ್ಲಿ ಮಳೆ ಬಂದ ಕಾರಣ ಮಾವ – ಅಳಿಯ ಇದರಿಂದ ರಕ್ಷಣೆ ಪಡೆಯುವ ಸಲುವಾಗಿ ರಸ್ತೆ ಬದಿಯ ಹುಣಸೆ ಮರದ ಕೆಳಗೆ ನಿಂತಿದ್ದಾರೆ. ಈ ವೇಳೆ ಸಿಡಿಲು ಬಡಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...