ಬುಧವಾರದಂದು ಗುಡುಗು ಸಿಡಿಲು ಸಹಿತ ಸುರಿದ ಮಳೆಗೆ ಮಾವ – ಅಳಿಯ ಬಲಿಯಾಗಿರುವ ಘಟನೆ ಗದಗ ಜಿಲ್ಲೆಯ ಅಬ್ಬಿಗೇರಿಯಲ್ಲಿ ನಡೆದಿದೆ.
ಕೋತಬಾಳ ಗ್ರಾಮದ ನಿವಾಸಿ 30 ವರ್ಷದ ವೆಂಕ್ಲಪ್ಪ ಬಸಪ್ಪ ಪಾಗದ ಅಬ್ಬಿಗೇರಿ ಗ್ರಾಮದಿಂದ ತನ್ನ ಅಕ್ಕನ ಮಗ 7ವರ್ಷದ ಕಿರಣನನ್ನ ಬೈಕಿನಲ್ಲಿ ಕರೆದುಕೊಂಡು ತನ್ನೂರಿಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಮಾರ್ಗಮಧ್ಯದಲ್ಲಿ ಮಳೆ ಬಂದ ಕಾರಣ ಮಾವ – ಅಳಿಯ ಇದರಿಂದ ರಕ್ಷಣೆ ಪಡೆಯುವ ಸಲುವಾಗಿ ರಸ್ತೆ ಬದಿಯ ಹುಣಸೆ ಮರದ ಕೆಳಗೆ ನಿಂತಿದ್ದಾರೆ. ಈ ವೇಳೆ ಸಿಡಿಲು ಬಡಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.