alex Certify ‘ಸರ್ಜಾ ಕುಟುಂಬದ ಬಗ್ಗೆ ಮಾತನಾಡಲು ಬಂದರೆ ಸುಮ್ಮನಿರಲ್ಲ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸರ್ಜಾ ಕುಟುಂಬದ ಬಗ್ಗೆ ಮಾತನಾಡಲು ಬಂದರೆ ಸುಮ್ಮನಿರಲ್ಲ’

ಬೆಂಗಳೂರು: ಇತ್ತೀಚೆಗೆ ಸಾವನ್ನಪ್ಪಿದ ಯುವ ನಟನ ಪೋಸ್ಟ್ ಮಾರ್ಟಮ್ ಆಗಿಲ್ಲ ಎಂಬ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿಕೆಗೆ ತಿರುಗೇಟು ನೀಡಿರುವ ಚಿರಂಜೀವಿ ಸರ್ಜಾ ಕುಟುಂಬದ ಆಪ್ತ ಶಿವಾರ್ಜುನ, ಸರ್ಜಾ ಕುಟುಂಬದ ಬಗ್ಗೆ ಮಾತನಾಡಿದರೆ ಸುಮ್ಮನಿರಲ್ಲ. ಇಂದ್ರಜಿತ್ ಲಂಕೇಶ್ ತಂದೆ ಸತ್ತಾಗ ಪೋಸ್ಟ್ ಮಾರ್ಟಮ್ ಮಾಡಿಸಿದ್ದರೇ ಎಂದು ಗುಡುಗಿದ್ದಾರೆ.

ಇಂದ್ರಜಿತ್ ಲಂಕೇಶ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಿವಾರ್ಜುನ, ನಾವು ಗೌರವದಿಂದ ಇದ್ದೇವೆ. ಗೌರವದಿಂದ ಬದುಕಲು ಬಿಡಿ. ನಮ್ಮ ಕುಟುಂಬದ ಬಗ್ಗೆ ಮಾತನಾಡಲು ಬಂದರೆ ಸುಮ್ಮನಿರಲ್ಲ ಎಂದು ಎಚ್ಚರಿಸಿದರು.

ಚಿರಂಜೀವಿ ಹೋಗಿ ಮೂರು ತಿಂಗಳು ಆಗುತ್ತಿದೆ. ಅವರ ಕುಟುಂಬ ನೆಮ್ಮದಿಯಿಂದ ಇರಲು ಬಿಡಿ. ಯಾಕೆ ಸುಮ್ಮನೆ ತೊಂದರೆ ಕೊಡುತ್ತೀರಾ? ಚಿರಂಜಿವಿ ಹೃದಯಾಘಾತದಿಂದ ಮೃತಪಟ್ಟಿರುವುದರಿಂದ ಪೋಸ್ಟ್ ಮಾರ್ಟಮ್ ಬೇಡ ಅಂದ್ರು ಅದಕ್ಕೆ ಮಾಡಿಲ್ಲ. ಹಿಂದೆ ಇಂದ್ರಜಿತ್ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆಗ ಮರಣೋತ್ತರ ಪರೀಕ್ಷೆ ಮಾಡಿಸಿದ್ದರಾ ಎಂದು ಪ್ರಶ್ನಿಸಿದ್ದಾರೆ.

ಇಂದ್ರಜಿತ್ ಗೆ ಇಂಡಸ್ಟ್ರಿ ಬಗ್ಗೆ ಕಾಳಜಿ ಇದ್ರೆ ಡ್ರಗ್ಸ್ ಮಾಫಿಯಾ ಬಗ್ಗೆ ಮೊದಲೇ ಪೊಲೀಸರಿಗೆ ಹೇಳಬೇಕಿತ್ತು. ಓರ್ವ ಪತ್ರಕರ್ತರಾಗಿ, ಲಂಕೇಶ್ ಮಗನಾಗಿ ಕಂಪ್ಲೆಂಟ್ ಕೊಡಿ. ಅದನ್ನು ಬಿಟ್ಟು ಮೈಕ್ ಸಿಕ್ತು, ಪ್ರಮೋಷನ್ ಸಿಗತ್ತೆ ಅಂತ ಮಾತನಾಡುವುದಲ್ಲ ಎಂದು ಕಿಡಿಕಾರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...