alex Certify ‘ವಾಸ್ತವದ ಅರಿವಿಲ್ಲದೆ ಪ್ರಧಾನಿ ಮೋದಿಯವರಿಂದ ಆನ್ ಲೈನ್ ತರಗತಿ ಪ್ರಸ್ತಾಪ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ವಾಸ್ತವದ ಅರಿವಿಲ್ಲದೆ ಪ್ರಧಾನಿ ಮೋದಿಯವರಿಂದ ಆನ್ ಲೈನ್ ತರಗತಿ ಪ್ರಸ್ತಾಪ’

ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಲಾಕ್ಡೌನ್ ಕುರಿತಂತೆ ಪದೇ ಪದೇ ವಾಗ್ದಾಳಿ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗ ಪ್ರಧಾನಿ ನರೇಂದ್ರ ಮೋದಿಯವರು ಪ್ರಸ್ತಾಪಿಸಿರುವ ಆನ್ ಲೈನ್ ತರಗತಿಗಳ ಕುರಿತು ಟೀಕೆ ಮಾಡಿದ್ದಾರೆ.

ಭಾರತದ ಅಸ್ತಿತ್ವವಿರುವುದೇ ಹಳ್ಳಿಗಳಲ್ಲಿ. ಆದರೆ ಇಂದಿಗೂ ಅಲ್ಲಿ ಕಂಪ್ಯೂಟರ್, ಲ್ಯಾಪ್ಟಾಪ್, ಸ್ಮಾರ್ಟ್ಫೋನ್ ಮರೀಚಿಕೆಯಾಗಿದೆ. ಜೊತೆಗೆ ನೆಟ್ವರ್ಕ್ ಕೂಡ ಸಿಗುವುದಿಲ್ಲ. ಹೀಗಾಗಿ ಹಳ್ಳಿಗಳಲ್ಲಿರುವ ವಿದ್ಯಾರ್ಥಿಗಳು ಆನ್ ಲೈನ್ ಶಿಕ್ಷಣದಲ್ಲಿ ಪಾಲ್ಗೊಳ್ಳುವುದಾದರೂ ಹೇಗೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಆನ್ ಲೈನ್ ತರಗತಿಗಳ ಪ್ರಸ್ತಾಪ ಸಾಮಾಜಿಕ ವಾಸ್ತವದ ಅರಿವಿಲ್ಲದವರ ಆಲೋಚನೆ ಎಂದು ಟೀಕಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರೋಕ್ಷವಾಗಿ ಕುಟುಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...