ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಾಣಿವಿಲಾಸ ಆಸ್ಪತ್ರೆ ಸಿಬ್ಬಂದಿಗೆ ಸರಿಯಾದ ಮಾಸ್ಕ್, ಪಿಪಿ ಕಿಟ್ ನೀಡಲಾಗಿಲ್ಲ. ಜೀವವನ್ನು ಪಣಕ್ಕಿಟ್ಟು ಹೋರಾಟ ನಡೆಸುತ್ತಿದ್ದೇವೆ. ಜೀವ ರಕ್ಷಣೆಗೆ ಕನಿಷ್ಠ ಸೌಲಭ್ಯ ನೀಡಿ ಎಂದು ಸಿಬ್ಬಂದಿ ಆಗ್ರಹಿಸಿದ್ದಾರೆ. ಆಸ್ಪತ್ರೆ ಹೊರಗೆ ನಿಂತು ಸೌಲಭ್ಯ ನೀಡುವಂತೆ ಆಸ್ಪತ್ರೆ ಸಿಬ್ಬಂದಿ ಆಗ್ರಹಿಸಿದ್ದಾರೆ.
ವಾಣಿವಿಲಾಸ ಆಸ್ಪತ್ರೆಯಲ್ಲಿ ಗರ್ಭಿಣಿ ಹೆರಿಗೆ ನಡೆದಿದೆ. ಹೆರಿಗೆ ನಂತ್ರ ಆಕೆ ಪಾದರಾಯನಪುರದ ನಿವಾಸಿ ಎಂಬ ಮಾಹಿತಿ ನೀಡಿದ್ದಾಳೆ. ಆಕೆ ಹಾಗೂ ಆಕೆ ಸಂಬಂಧಿಕರು ಆಸ್ಪತ್ರೆಯಲ್ಲಿ ಓಡಾಡಿದ್ದಾರೆ. ಇದು ಈಗ ಭಯಕ್ಕೆ ಕಾರಣವಾಗಿದೆ.
ಬೇರೆ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ಷಣೆ ಸೌಲಭ್ಯ ನೀಡಿದ್ರೆ ಕೆಲಸ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ.