alex Certify ರೈತರಿಗೆ ‘ಬಂಪರ್’ ಸುದ್ದಿ: ಮನೆ ಬಾಗಿಲಿಗೇ ತಲುಪಲಿದೆ ಬೀಜ – ಸಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ‘ಬಂಪರ್’ ಸುದ್ದಿ: ಮನೆ ಬಾಗಿಲಿಗೇ ತಲುಪಲಿದೆ ಬೀಜ – ಸಸಿ

ರೈತರಿಗೆ ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯ ಬಂಪರ್ ಸುದ್ದಿಯೊಂದನ್ನು ನೀಡಿದೆ. ಲಾಕ್ಡೌನ್ ಜಾರಿಯಲ್ಲಿರುವುದರಿಂದ ಬೀಜ ಹಾಗೂ ಸಸಿ ಸಾಗಾಣಿಕೆ ಮಾಡಲು ರೈತರಿಗೆ ಕಷ್ಟವಾಗಿರುವ ಹಿನ್ನೆಲೆಯಲ್ಲಿ ರೈತರ ಮನೆ ಬಾಗಿಲಿಗೇ ಉಚಿತವಾಗಿ ಬೀಜ – ಸಸಿ ವಿತರಿಸಲು ಮುಂದಾಗಿದೆ.

ಭತ್ತ, ರಾಗಿ, ಹೆಸರು, ಸೋಯಾಬಿನ್ ಬೀಜಗಳು, ಪಪ್ಪಾಯ, ಸಪೋಟ, ಮಾವು, ತೆಂಗು, ಅಡಿಕೆ ಮೊದಲಾದ ತೋಟಗಾರಿಕೆ ಸಸಿಗಳನ್ನು ಪೂರೈಕೆ ಮಾಡಲಾಗುತ್ತಿದ್ದು, ರೈತರು ವಿವಿಯನ್ನು ಸಂಪರ್ಕಿಸಿ ಬೇಡಿಕೆ ಪಟ್ಟಿ ಸಲ್ಲಿಸಿದರೆ ಎರಡು ದಿನಗಳಲ್ಲಿ ಅವುಗಳನ್ನು ಪೂರೈಸಲಾಗುತ್ತದೆ.

ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯ ಏಳು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದ್ದು, ವಿವಿಧೆಡೆ 20 ಕೇಂದ್ರಗಳನ್ನು ಹೊಂದಿದೆ. ಈ ಕೇಂದ್ರಗಳ ಮೂಲಕ ರೈತರಿಗೆ ಬೀಜ ಹಾಗೂ ಸಸಿಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...