alex Certify ರಂಜಾನ್ ಹಿನ್ನೆಲೆ: ಸರ್ಕಾರದಿಂದ ಹೊಸ ಗೈಡ್ ಲೈನ್ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಂಜಾನ್ ಹಿನ್ನೆಲೆ: ಸರ್ಕಾರದಿಂದ ಹೊಸ ಗೈಡ್ ಲೈನ್ ಬಿಡುಗಡೆ

ಬೆಂಗಳೂರು: ನಾಳೆಯಿಂದ ರಂಜಾನ್ ಹಬ್ಬ ಆರಂಭವಾಗುತ್ತಿದ್ದು, ಕೊರೊನಾ ಸೋಂಕು ಹೆಚ್ಚುತಿರುವ ಹಿನ್ನೆಲೆಯಲ್ಲಿ ರಂಜಾನ್ ಆಚರಣೆಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ರಂಜಾನ್ ಹೊಸ ಗೈಡ್ ಲೈನ್ ಪ್ರಮುಖ ಅಂಶಗಳು:

* ಕಂಟೇನ್ಮೆಂಟ್ ಝೋನ್ ಗಳಲ್ಲಿರುವ ಮಸೀದಿಗಳು ಬಂದ್.

* ಉಳಿದ ಮಸಿದಿಗಳಲ್ಲಿ ಮಾತ್ರ ಅವಕಾಶ
* ಮನೆಯಲ್ಲಿಯೇ ವುಲೂಹ್ ಮಾಡಿಕೊಂಡು ಬರಬೇಕು

* ಸಾಮೂಹಿಕ ಪ್ರಾರ್ಥನೆಯಲ್ಲಿ ದೈಹಿಕ ಅಂತರ ಕಡ್ಡಾಯ.

* ಪ್ರಾರ್ಥನೆಗೆ ಮೊದಲು ಮಾಡುವ ಸ್ವಚ್ಚತೆಗೆ ಪ್ರತ್ಯೇಕ ವ್ಯವಸ್ಥೆ ಇರಬೇಕು.

* ನಮಾಜ್ ಮಾಡುವ ವೇಳೆ ಒಂದೇ ಕಾರ್ಪೆಟ್ ಗಳನ್ನು ಬಳಸುವಂತಿಲ್ಲ.

* ಪ್ರತಿಯೊಬ್ಬರೂ ಪ್ರತ್ಯೇಕ ಕಾರ್ಪೆಟ್ ತರಬೇಕು.

* ದೈಹಿಕ ಅಂತರ ಪಾಲನೆಗಾಗಿ ಮಸಿದಿ ತೆರೆಯಲು ಮೂರು ನಿರ್ಧಿಷ್ಟ ಸಮಯ ನಿಗದಿ.

* ಪ್ರಾರ್ಥನೆಗೆ 5 ನಿಮಿಷ ಮೊದಲು ಮಸಿದಿ ತೆರೆಯಲು ಅವಕಾಶ

* ಪ್ರಾರ್ಥನೆ ವೇಳೆಯೂ ಮಾಸ್ಕ್ ಕಡ್ಡಾಯ.

* ಉಪವಾಸ ಬಿಡುವಾಗ ಮಸಿದಿಗೆ ಆಹಾರ ತರುವಂತಿಲ್ಲ

* ಉಪವಾಸವನ್ನು ಮನೆಯಲ್ಲೇ ಬಿಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...