alex Certify ಮೃತದೇಹ ತರಲು ಹೆಚ್ಚು ಜಾಗಬೇಕು ಎಂದ ಶಾಸಕ ಬೆಲ್ಲದ್​ ವಿರುದ್ಧ ಕಾಂಗ್ರೆಸ್​ ಕಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೃತದೇಹ ತರಲು ಹೆಚ್ಚು ಜಾಗಬೇಕು ಎಂದ ಶಾಸಕ ಬೆಲ್ಲದ್​ ವಿರುದ್ಧ ಕಾಂಗ್ರೆಸ್​ ಕಿಡಿ

ಉಕ್ರೇನ್​ನಲ್ಲಿ ಮೃತಪಟ್ಟ ಕನ್ನಡಿಗ ವಿದ್ಯಾರ್ಥಿಯ ಮೃತದೇಹವನ್ನು ಭಾರತಕ್ಕೆ ಕರೆತರುವ ವಿಚಾರವಾಗಿ ‘ಮೃತದೇಹವು ಹೆಚ್ಚು ಜಾಗವನ್ನು ತೆಗೆದುಕೊಳ್ಳುತ್ತದೆ’ಎಂಬ ಬಿಜೆಪಿಯ ಶಾಸಕ ಅರವಿಂದ ಬೆಲ್ಲದ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ​​ ಕಾಂಗ್ರೆಸ್​, ಕ್ರೌರ್ಯವು ಕೇಸರಿ ಪಕ್ಷದ ಡಿಎನ್​ಎ ಎಂದು ಕಿಡಿಕಾರಿದೆ. ಅಲ್ಲದೇ ಯುದ್ಧ ಪೀಡಿತ ಸ್ಥಳದಿಂದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ನೆಪದಲ್ಲಿ ಕೇಂದ್ರ ಸರ್ಕಾರ ಪ್ರಚಾರ ಗಿಟ್ಟಿಸಿಕೊಳ್ತಿದೆ ಎಂದು ಆರೋಪಿಸಿದೆ.

ಮಾರ್ಚ್ 1ರಂದು ಹಾವೇರಿ ಮೂಲದ ಭಾರತೀಯ ವಿದ್ಯಾರ್ಥಿ ನವೀನ್​ ಎಸ್​ ಜೆ ಉಕ್ರೇನ್​ನಲ್ಲಿ ರಷ್ಯಾದ ದಾಳಿಯಿಂದ ಹತರಾಗಿದ್ದರು. ಖಾರ್ಕಿವ್​ನಲ್ಲಿ ತನಗಾಗಿ ಆಹಾರವನ್ನು ತರಲು ಅಂಗಡಿಗೆ ತೆರಳಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿತ್ತು.

ಅಹಂಕಾರವನ್ನೇ ಕುಡಿದಿರುವ ಹೃದಯ ಹೀನ ಬಿಜೆಪಿ ನಾಯಕರ ತಲೆಗೆ ಅಧಿಕಾರದ ಮದವೇರಿದೆ. ಕೇಂದ್ರ ಸಚಿವ ಪ್ರಹ್ಲಾದ್​ ಜೋಷಿ ಉಕ್ರೇನ್​ನಲ್ಲಿರುವ ವಿದ್ಯಾರ್ಥಿಗಳನ್ನು ನೀಟ್​ನಲ್ಲಿ ಫೇಲ್​ ಆದವರು ಎಂದು ಕರೆಯುತ್ತಾರೆ. ಅರವಿಂದ್​ ಬೆಲ್ಲದ್​ ಅಂತೂ ತಮ್ಮ ಸಮತೋಲನವನ್ನೇ ಕಳೆದುಕೊಂಡಿದ್ದಾರೆ. ಅಸೂಕ್ಷ್ಮತೆ ಹಾಗೂ ಕ್ರೌರ್ಯ ಬಿಜೆಪಿಯ ಡಿಎನ್​ಎ ಎಂದು ಕಾಂಗ್ರೆಸ್​ ಮುಖ್ಯ ವಕ್ತಾರ ರಣದೀಪ್​ ಸುರ್ಜೇವಾಲಾ ಟ್ವೀಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...