ದೇಶದಲ್ಲಿ ಕರೋನಾ ಮಹಾಮಾರಿ ಆರ್ಭಟಿಸುತ್ತಿರುವ ಕಾರಣ ಕೇಂದ್ರ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಮೇ 3ರವರೆಗೆ ಇದು ಮುಂದುವರೆಯಲಿದ್ದು, ಪರಿಸ್ಥಿತಿಯನ್ನು ಅವಲೋಕಿಸಿ ಕೇಂದ್ರ ಸರ್ಕಾರ ತನ್ನ ನಿರ್ಧಾರ ಕೈಗೊಳ್ಳಲಿದೆ.
ಕರ್ನಾಟಕದಲ್ಲೂ ಲಾಕ್ ಡೌನ್ ಇರುವ ಕಾರಣ ಮೂವರು ಮಹಾತ್ಮರ ಜಯಂತಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ.
ಏಪ್ರಿಲ್ 26ರಂದು ಬಸವ ಜಯಂತಿ, ಏಪ್ರಿಲ್ 28ರಂದು ಶಂಕರಾಚಾರ್ಯ ಜಯಂತಿ ಹಾಗೂ ಏಪ್ರಿಲ್ 30ರಂದು ಭಗೀರಥ ಜಯಂತಿ ಇದ್ದು, ಇದನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.