ಬೆಂಗಳೂರಿನಲ್ಲಿ ಕೊರೊನಾ ಸೋಂಕು ದಿನ ದಿನಕ್ಕೂ ಹೆಚ್ಚಾಗ್ತಿದೆ. ಪಾದರಾಯನಪುರ ಗಲಾಟೆ ಬೆಂಗಳೂರಿನ ಐದು ಪ್ರದೇಶಗಳಿಗೆ ಆತಂಕವನ್ನುಂಟು ಮಾಡಿದೆ. ಪಾದರಾಯನಪುರ ಗಲಾಟೆಯಲ್ಲಿ ಪಾಲ್ಗೊಂಡಿದ್ದ ಐವರಿಗೆ ಸೋಂಕು ಕಾಣಿಸಿಕೊಂಡಿದೆ. ಈ ಐವರು ಐದು ಪ್ರದೇಶಗಳೊಂದಿಗೆ ನಂಟು ಹೊಂದಿದ್ದರು ಎನ್ನಲಾಗಿದೆ.
ಆರೋಗ್ಯ ಇಲಾಖೆಯಿಂದ ಈ ಬಗ್ಗೆ ತನಿಖೆ ನಡೆಯುತ್ತಿದೆ. ಮಾಹಿತಿ ಪ್ರಕಾರ, ಪಾದರಾಯನಪುರ ಗಲಾಟೆಯಲ್ಲಿ ಪಾಲ್ಗೊಂಡಿದ್ದ ಸೋಂಕಿತರ ಸಂಪರ್ಕಕ್ಕೆ ಟ್ಯಾನಿರೋಡ್, ಶಿವಾಜಿನಗರ, ನಾಯಂಡಳ್ಳಿ, ಹೆಗಡೆ ನಗರ, ದೊಡ್ಡಬಸ್ತಿ ಜನರು ಬಂದಿದ್ದರು ಎನ್ನಲಾಗಿದೆ. ಈ ಐದೂ ಪ್ರದೇಶದ ಕೆಲ ಜನರು ಗಲಾಟೆಯಲ್ಲಿ ಪಾಲ್ಗೊಂಡಿದ್ದರು. ಅವ್ರಿಗೂ ಸೋಂಕು ಬಂದಿರುವ ಸಾಧ್ಯತೆಯಿದೆ.
ಬಂಧಿತ ಸೋಂಕಿತರು ತಮ್ಮ ಸಂಪರ್ಕದಲ್ಲಿರುವವರ ಬಗ್ಗೆ ಮಾಹಿತಿ ನೀಡುತ್ತಿಲ್ಲವಂತೆ. ಕ್ವಾರಂಟೈನ್ ನಲ್ಲಿರುವವರು ಕೂಡ ಸರಿಯಾದ ಮಾಹಿತಿ ನೀಡುತ್ತಿಲ್ಲವಂತೆ. ಇದು ಆರೋಗ್ಯ ಇಲಾಖೆಗೆ ತಲೆನೋವು ತಂದಿದೆ. ಇದ್ರ ಜೊತೆಗೆ ಪಾದರಾಯನಪುರ ಗಲಾಟೆ ನಿಯಂತ್ರಣದಲ್ಲಿ ಪಾಲ್ಗೊಂಡಿದ್ದ ಪೊಲೀಸರು ಸೇರಿದಂತೆ ರಾಮನಗರಕ್ಕೆ ಬಂಧಿತರನ್ನು ಕರೆದೊಯ್ದ ಪೊಲೀಸರವರೆಗೆ 200ಕ್ಕೂ ಹೆಚ್ಚು ಪೊಲೀಸರಿಗೆ ಪರೀಕ್ಷೆ ನಡೆಯುತ್ತಿದೆ.