ರಾಜ್ಯ ರಾಜಧಾನಿ ಬೆಂಗಳೂರನ್ನು ಕೇಂದ್ರ ಸರ್ಕಾರ ಕೆಂಪು ವಲಯವೆಂದು ಘೋಷಣೆ ಮಾಡಿದೆ. ಆದ್ರೆ ರಾಜ್ಯ ಸರ್ಕಾರ ಇಡೀ ಬೆಂಗಳೂರನ್ನು ಕೆಂಪು ವಲಯವನ್ನಾಗಿ ಘೋಷಿಸುವ ಬದಲು ಎರಡು ವಲಯಗಳಾಗಿ ವಿಂಗಡಿಸುವಂತೆ ಕೇಂದ್ರಕ್ಕೆ ಮನವಿ ಮಾಡಲು ಮುಂದಾಗಿದೆ.
ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಬೆಂಗಳೂರಿನ 198 ವಾರ್ಡ್ ಗಳಲ್ಲಿ 24 ವಾರ್ಡ್ ಗಳನ್ನು ಕಂಟೆನ್ಮೆಂಟ್ ವಲಯಗಳಾಗಿ ಘೋಷಣೆ ಮಾಡಲಾಗುವುದು ಎಂದಿದ್ದಾರೆ. ಉಳಿದ 154 ವಾರ್ಡ್ ಹಸಿರು ವಲಯದಲ್ಲಿ ಬರಲಿದೆ. ಇಲ್ಲಿ ಎಲ್ಲ ಸಡಿಲಿಕೆಗಳು ಅನ್ವಯವಾಗಲಿದೆ. ಆದ್ರೆ ಕಂಟೆನ್ಮೆಂಟ್ ವಲಯದಲ್ಲಿ ಯಾವುದೇ ಸಡಿಲಿಕೆಯಿರುವುದಿಲ್ಲವೆಂದು ಅವರು ಹೇಳಿದ್ದಾರೆ.
ಕಂಟೆನ್ಮೆಂಟ್ ವಲಯದಲ್ಲಿ ಮದ್ಯ ಮಾರಾಟಕ್ಕೂ ನಿಷೇಧ ಹೇರಲಾಗಿದೆ. ಮದ್ಯವನ್ನು ಬೇರೆ ವಲಯದಿಂದ ತರುವಂತಿಲ್ಲ. ಎಂಟ್ರಿ ಹಾಗೂ ಎಕ್ಸಿಟ್ ಗೇಟ್ ನಲ್ಲಿ ತಪಾಸಣೆ ನಡೆಸಲಾಗುತ್ತದೆ. ಕಂಟೆನ್ಮೆಂಟ್ ವಲಯದಲ್ಲಿ ಬಿಗಿ ಭದ್ರತೆ ಇರಲಿದೆ ಎಂದವರು ಹೇಳಿದ್ದಾರೆ. ಈ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡಲಿದ್ದು, ಕೇಂದ್ರದ ನಿರ್ಧಾರದ ನಂತ್ರ ಮುಂದಿನ ಕ್ರಮ ಎನ್ನಲಾಗಿದೆ.