alex Certify ಬಾಯಿಂದ ಮೂಡಿದ ತಮ್ಮ ಚಿತ್ರ ಕಂಡು ಬೆರಗಾದ ಶಾಸಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಿಂದ ಮೂಡಿದ ತಮ್ಮ ಚಿತ್ರ ಕಂಡು ಬೆರಗಾದ ಶಾಸಕ…!

ಅಪರೂಪದ ಕಲಾವಿದರೊಬ್ಬರು ಕೈಯನ್ನು ಬಳಸದೆ ಬಾಯಿ ಸಹಾಯದಿಂದ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಅವರ ಭಾವಚಿತ್ರ ಬಿಡಿಸಿದ್ದಾರೆ. ಇವರ ಈ ಕಲೆಗೆ ರೇಣುಕಾಚಾರ್ಯ ಮನಸೋತಿದ್ದಾರೆ.

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಗಂಗನಹರಸಿ ಗ್ರಾಮದ ಕಲಾವಿದ ನಾಗರಾಜ್ ಎಂಬುವರು ಈ ಚಿತ್ರ ಬಿಡಿಸಿದ್ದು, ರೇಣುಕಾಚಾರ್ಯ ನಾಗರಾಜ್ ಅವರ ಪ್ರತಿಭೆಗೆ ಮನಸೋತು ಕರೆ ಮಾಡಿ ಮಾತನಾಡಿದ್ದಾರೆ.

ನಿಮ್ಮ ಕಲೆಯನ್ನು ಇದೇ ರೀತಿ ಮುಂದುವರಿಸಿಕೊಂಡು ಹೋಗಿ ಎಂದು ಪ್ರೋತ್ಸಾಹ ನೀಡಿದ್ದಾರಂತೆ. ಸ್ವತಃ ರೇಣುಕಾಚಾರ್ಯ ಇದನ್ನು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಕಲೆಗೆ ಮನ ಸೋಲದವರೇ ಇಲ್ಲಾ.ಹರಿಹರ ತಾಲೂಕಿನ ಗಂಗನಹರಸಿ ಗ್ರಾಮದ ಕಲಾವಿದ ನಾಗರಾಜ್ ನನ್ನ ಚಿತ್ರ ಬಿಡಿಸಿದ್ದು ಅದ್ಬುತವಾಗಿದೆ.ಅದು ಕೈಯಿಂದ ಬರೆದ ಚಿತ್ರವಲ್ಲ ಮೌತ್ ಪೈಟಿಂಗ್ ಮೂಲಕ ನನ್ನ ಚಿತ್ರ ಬಿಡಿಸಿದ್ದಾನೆ.. ಆತನ ಕಲೆಯನ್ನು ನೋಡಿ ಮನಸೋತು ಆತನಿಗೆ ಪೋನ್ ಮಾಡಿ ಅಭಿನಂದನೆ ಸಲ್ಲಿಸಿದೆನಲ್ಲದೇ, ಇದೇ ರೀತಿ ಕಲೆಯನ್ನು ಮುಂದುವರೆಸಿಕೊಂಡು ಹೋಗುವಂತೆ ಪ್ರೋತ್ಸಾಹಿಸಿದೆನು…

Posted by M P Renukacharya on Sunday, August 16, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...