ಪ್ರಧಾನಿ ಮೋದಿ ಅವರು ವಜ್ರಕ್ಕಿಂತ ಕಠೋರ, ಹೂವಿನಷ್ಟೇ ಮಧುರ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಬಣ್ಣಿಸಿದ್ದಾರೆ. ಶಿವಮೊಗ್ಗದಲ್ಲಿಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಜಗತ್ತು ಮೋದಿಯವರನ್ನು ಪ್ರೀತಿಸುತ್ತಿದೆ. ಯುವಕರ ಆರಾಧಕರಾಗಿರುವ ಅವರು ಸಾಧನೆಯ ಹರಿಕಾರರಾಗಿದ್ದಾರೆ. ಜಗತ್ತಿನ ರಾಷ್ಟ್ರಗಳು ಭಾರತದತ್ತ ನೋಡುತ್ತಿದ್ದು, ಮೋದಿ ಅವರ ಕಾರಣಕ್ಕಾಗಿಯೇ ಗೆಳೆತನವನ್ನು ಬಯಸಲು ತುದಿಗಾಲಲ್ಲಿ ನಿಂತಿವೆ ಎಂದರು.
ಮೋದಿ ಹೂವಿನಷ್ಟೆ ಹಗುರವಾಗಿದ್ದರೂ ಕೂಡ ಮಿತ್ರನಿಗೆ ಮಿತ್ರ ಶತ್ರುವಿಗೆ ಶತ್ರು ಆಗಿದ್ದಾರೆ. ಭಾರತವನ್ನು ಕೆಣಕುವ ಶತ್ರು ರಾಷ್ಟ್ರಗಳಿಗೆ ಸಿಂಹ ಸ್ವಪ್ನವಾಗಿದ್ದಾರೆ. ಅವರು ದೇಶದ ರಕ್ಷಕರು. ಅವರು ಒಂದು ವರ್ಷದಲ್ಲಿ ಮಾಡಿರುವ ಸಾಧನೆಗಳು, ಅಭಿವೃದ್ಧಿ ಅಪಾರವಾದದು ಎಂದು ಹೇಳಿದರು.