ಪಾದರಾಯನಪುರ ಗಲಾಟೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪಾದರಾಯನಪುರ ಜನರನ್ನು ಗಲಾಟೆಗೆ ಪ್ರೋತ್ಸಾಹಿಸಿದ್ದೇ ಇರ್ಫಾನ್ ಎಂಬುದು ಗೊತ್ತಾಗಿದೆ. ಸೋಂಕು ಶಂಕಿತರನ್ನು ಬೇರೆ ಕಡೆ ಕರೆದುಕೊಂಡು ಹೋಗಲು ಈತ ನಿರಾಕರಿಸಿದ್ದ. ಸರಿಯಾದ ವ್ಯವಸ್ಥೆ ಅಲ್ಲಿರಲ್ಲ. ಪೊಲೀಸರ ಮಾತನ್ನು ಕೇಳಬೇಡಿ ಎಂದು ಜನರಿಗೆ ಹೇಳಿದ್ದನಂತೆ
ಯಾರೇ ಬಂದ್ರೂ ಅವ್ರ ಜೊತೆ ಹೋಗಬೇಡಿ. ಗಲಾಟೆ ಮಾಡಿ ಎಂದು ಇರ್ಫಾನ್ ಹೇಳಿದ್ದನಂತೆ. ಆರಂಭದಲ್ಲಿ ಜನರನ್ನು ಮುಂದೆ ಕಳುಹಿಸಿದ್ದ ಈತ ಗಲಾಟೆ ಜೋರಾಗ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತಿದ್ದ. ವಿಚಾರಣೆ ವೇಳೆ ಇರ್ಫಾನ್ ಹೆಸರು ಹೊರಗೆ ಬಂದಿತ್ತು. ನಂತ್ರ ಆತನನ್ನು ಬಂಧಿಸಲಾಗಿತ್ತು.
ಬಂಧಿತ ಇರ್ಫಾನ್ ಈಗ ಬಾಯ್ಬಿಟ್ಟಿದ್ದಾನೆ. ಇರ್ಫಾನ್ ಸಾಮಾಜಿಕ ಸೇವೆ ಹೆಸರಿನಲ್ಲಿ ಜನರನ್ನು ಗಮನ ಸೆಳೆಯುವ ಪ್ರಯತ್ನ ನಡೆಸಿದ್ದ.