alex Certify ಪರಿಹಾರ ಧನಕ್ಕೆ ಅರ್ಜಿ ಸಲ್ಲಿಸಲು ಮುಗಿಬಿದ್ದ ಆಟೋ ಚಾಲಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಿಹಾರ ಧನಕ್ಕೆ ಅರ್ಜಿ ಸಲ್ಲಿಸಲು ಮುಗಿಬಿದ್ದ ಆಟೋ ಚಾಲಕರು

ಸರ್ಕಾರ ಘೋಷಿಸಿದ ಹಣ ಪಡೆಯಲು ಆಟೋ ಚಾಲಕರು ಶಿವಮೊಗ್ಗ ಆರ್‍ಟಿಓ ಕಚೇರಿ ಮುಂದೆ ಆನ್ ಲೈನ್ ಮೂಲಕ ಅರ್ಜಿ ಪಡೆಯಲು ನೂಕುನುಗ್ಗಲು ನಡೆಸಿದರು.

ಆರ್‍ಟಿಓ ಕಚೇರಿ ಬಳಿ ಸುಮಾರು 100 ಕ್ಕೂ ಹೆಚ್ಚು ಜನ ಆಟೋ ಚಾಲಕರು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಮುಗಿಬಿದ್ದಿದ್ದರು. ಮದ್ಯವರ್ತಿಗಳು ಈ ಸಂದರ್ಭವನ್ನು ಬಳಸಿಕೊಂಡು ಆನ್‍ಲೈನ್ ಅರ್ಜಿಗಾಗಿ 110 ರೂ.ಗಳ ಶುಲ್ಕ ಪಾವತಿಸಲು ಒತ್ತಾಯಿಸುತ್ತಿದ್ದರು. ಆದರೆ ಇದಕ್ಕೆ ಆಟೋ ಚಾಲಕರು ವಿರೋಧ ವ್ಯಕ್ತಪಡಿಸಿ ಏಕೆ ಹಣ ನೀಡಬೇಕು ಎಂದು ಪ್ರಶ್ನೆ ಮಾಡಿದರು.

ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಆಟೋ ಚಾಲಕರು ದಿಡೀರ್ ಪ್ರತಿಭಟನೆಗಿಳಿದರು. ಜಿಲ್ಲೆಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಆಟೋಗಳಿರಬಹುದು. ಇವರ ಬಳಿ ತಲಾ 110 ರೂ. ಸಂಗ್ರಹಿಸಿದರೆ 10ಲಕ್ಷಕ್ಕೂ ಹೆಚ್ಚು ಹಣ ಮಧ್ಯವರ್ತಿ ಪಾಲಾಗುತ್ತಿದೆ. ಇದು ಒಂದು ರೀತಿಯ ಹಗಲು ದರೋಡೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಪಕ್ಕದಲ್ಲೇ ಇರುವ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ತಿಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...