alex Certify ಪಕ್ಷ, ಕೆಲಸಕ್ಕಿಂತ ನನಗೆ ಮಾನವೀಯತೆ ಮುಖ್ಯ: ಮುನಿರತ್ನ ದೊಡ್ಡತನ ನೋಡಿ ಪ್ರಚಾರಕ್ಕೆ ಬಂದಿದ್ದೇನೆ ಎಂದ ’ಸಾರಥಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಕ್ಷ, ಕೆಲಸಕ್ಕಿಂತ ನನಗೆ ಮಾನವೀಯತೆ ಮುಖ್ಯ: ಮುನಿರತ್ನ ದೊಡ್ಡತನ ನೋಡಿ ಪ್ರಚಾರಕ್ಕೆ ಬಂದಿದ್ದೇನೆ ಎಂದ ’ಸಾರಥಿ’

ಬೆಂಗಳೂರು: ಆರ್.ಆರ್. ನಗರ ಉಪಚುನಾವಣಾ ಅಖಾಡಕ್ಕೆ ಇಂದು ’ಸಾರಥಿ’ ಎಂಟ್ರಿ ಕೊಟ್ಟಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ನಟ ದರ್ಶನ್, ನಾನು ಯಾವುದೇ ಪಕ್ಷ ನೋಡಿ, ವ್ಯಕ್ತಿ ನೋಡಿ ಪ್ರಚಾರ ಮಾಡುತ್ತಿಲ್ಲ. ಮುನಿರತ್ನ ಅವರಲ್ಲಿರುವ ಮಾನವೀಯತೆ, ದೊಡ್ಡತನ ನೋಡಿ ಅವರ ಪರ ಪ್ರಚಾರ ಮಾಡುತ್ತಿದ್ದೇನೆ ಎಂದು ಹೇಳಿದರು.

ಕೊರೊನಾ ಸೋಂಕಿನಿಂದಾಗಿ ಲಾಕ್ ಡೌನ್ ಆರಂಭವಾಗಿತ್ತು. ಅಂತಹ ಸಂದರ್ಭದಲ್ಲಿ ಹಲವಾರು ಜನರು ಅನ್ನ, ಆಹಾರವಿಲ್ಲದೇ ಪರದಾಡಿದ್ದರು. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಮುನಿರತ್ನ ಅವರು ಅನ್ನ ದಾಸೋಹ ನಡೆಸಿ ಕಷ್ಟದಲ್ಲಿರುವವರಿಗೆ ಊಟ ನೀಡಿದರು. ಅವರಲ್ಲಿನ ಆ ಮಾನವೀಯತೆ ದೃಷ್ಟಿ ನೋಡಿ ನಾನಿಂದು ಅವರ ಪರ ಚುನಾವಣಾ ಪ್ರಚಾರ ಮಾಡುತ್ತಿದ್ದೇನೆ. ಅವರು ಶಾಸಕರಾಗಿ, ನಿರ್ಮಾಪಕರಾಗಿ ಏನೇನು ಮಾಡಿದ್ದಾರೆ ಎಂದು ನಾನು ನೋಡುತ್ತಿಲ್ಲ, ಅವರಲ್ಲಿನ ದೊಡ್ಡತನ ನೋಡಿ ಪ್ರಚಾರ ಮಾಡುತ್ತಿದ್ದೇನೆ ಎಂದು ತಿಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...