alex Certify ನಮ್ಮ ಹಣೆ ಬರಹ ಕೆಟ್ಟಿದೆ ಹಾಗಾಗಿ ಇನ್ನೂ ಮಂತ್ರಿಯಾಗಿಲ್ಲ: ಎಂಟಿಬಿ ಹತಾಶೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಮ್ಮ ಹಣೆ ಬರಹ ಕೆಟ್ಟಿದೆ ಹಾಗಾಗಿ ಇನ್ನೂ ಮಂತ್ರಿಯಾಗಿಲ್ಲ: ಎಂಟಿಬಿ ಹತಾಶೆ

ಬೆಂಗಳೂರು: ನಾನು ವಿಧಾನ ಪರಿಷತ್ ಸದಸ್ಯನಾಗಿ 5 ತಿಂಗಳಾಗಿದೆ. ಆದರೆ ಈವರೆಗೂ ಮಂತ್ರಿ ಮಾಡಿಲ್ಲ. ನನ್ನ ಹಣೆ ಬರಹ ಕೆಟ್ಟಿದೆ ಹಾಗಾಗಿ ಇನ್ನೂ ಮಂತ್ರಿಯಾಗಿಲ್ಲ ಎಂದು ಶಾಸಕ ಎಂಟಿಬಿ ನಾಗರಾಜ್ ಹತಾಶೆ ವ್ಯಕ್ತಪಡಿಸಿದ್ದಾರೆ.

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಗರಾಜ್, ಹಿಂದೆ ನಾವು ಸಚಿವರಾಗಿದ್ದವರು. ಈಗ ಶಾಸಕನಾಗಿ ಇರಬೇಕು ಎಂದರೆ ಬೇಸರವಾಗುತ್ತೆ. ಮಂತ್ರಿ ಸ್ಥಾನ ಸಿಗುವವರೆಗೂ ಕಾಯಲೇಬೇಕು. ಅವರ ಹಣೆ ಬರಹ ಚೆನ್ನಾಗಿತ್ತು ಸಚಿವರಾದ್ರು, ನಮ್ಮ ಹಣೆ ಬರಹ ಕೆಟ್ಟಿತ್ತು ಹಾಗಾಗಿ ಇನ್ನೂ ಶಾಸಕರಾಗಿಯೇ ಇದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಮೇಶ್ ಜಾರಕಿಹೊಳಿ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ನಾವೆಲ್ಲ 17 ಜನರು ಒಟ್ಟಾಗಿ 15 ದಿನಗಳ ಕಾಲ ಮುಂಬೈನಲ್ಲಿ ಇದ್ದವರು. ಬಳಿಕ ಭೇಟಿಯಾಗಿರಲಿಲ್ಲ. ಹಾಗಾಗಿ ಕಷ್ಟ ಸುಖ ಚರ್ಚೆ ಮಾಡಲು ನಿನ್ನೆ ಒಟ್ಟಾಗಿ ಸೇರಿದ್ದೆವು. ರಮೇಶ್ ಜಾರಕಿಹೊಳಿ ಸಿಕ್ಕಿರಲಿಲ್ಲ ಇದೀಗ ಅವರ ನಿವಾಸಕ್ಕೆ ಬಂದು ಭೇಟಿಯಾಗಿದ್ದೇನೆ ಅಷ್ಟೇ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...