alex Certify ಜೆಡಿಎಸ್ ಮಗುವಿದ್ದಂತೆ, ಮಿಠಾಯಿ ಕೊಡುವವರ ಬಳಿ ಹೋಗುತ್ತೆ ಎಂದ ಹೆಚ್. ವಿಶ್ವನಾಥ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೆಡಿಎಸ್ ಮಗುವಿದ್ದಂತೆ, ಮಿಠಾಯಿ ಕೊಡುವವರ ಬಳಿ ಹೋಗುತ್ತೆ ಎಂದ ಹೆಚ್. ವಿಶ್ವನಾಥ್

ಮೈಸೂರು: ಸಭಾಪತಿ ವಿರುದ್ಧ ಅವಿಶ್ವಾಸ ಮಂಡನೆ ವಿಚಾರವಾಗಿ ಮಾತನಾಡಿದ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ಜೆಡಿಎಸ್ ಮಿಠಾಯಿ ಕೊಡುವವರ ಬಳಿ ಹೋಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ವಿಶ್ವನಾಥ್, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜೆಡಿಎಸ್ ಮಗುವಿದ್ದಂತೆ. ಯಾರು ಮಿಠಾಯಿ ಕೊಡುತ್ತಾರೆ ಅವರ ಬಳಿ ಹೋಗುತ್ತೆ ಎಂದು ಹೇಳಿದರು.

ಪರಿಷತ್ ನಲ್ಲಿ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಇಡೀ ಸದನದಲ್ಲಿ ನಡೆದ ಪ್ರಸಂಗವನ್ನು ನಾನು ವೇದನೆಯಿಂದ ನೋಡಿದ್ದೇನೆ. ಸಾರ್ವಭೌಮ ಸದನವನ್ನು ಬೂಟು ಕಾಲಿಂದ ಒದ್ದಿರುವುದು ಯಾವ ರೀತಿ ಗೌರವ ಸೂಚಿಸುತ್ತದೆ? ಸದನವನ್ನು ದೇವಾಲಯ ಎಂದು ಕರೆಯುತ್ತೇವೆ. ಅದಕ್ಕೆ ಪ್ರಧಾನಿ ಮೋದಿ ಲೋಕಸಭೆಗೆ ಹಣೆಯಿಟ್ಟು ನಮಸ್ಕಾರ ಮಾಡಿ ಹೋಗಿದ್ರು. ಅಂತಹ ಸದನಕ್ಕೆ ಇವರು ಅವಮಾನ ಮಾಡಿದ್ದಾರೆ. ಭಾರತಾಂಬೆ ಹಾಗೂ ಜನರು ನಮ್ಮನ್ನು ಕ್ಷಮಿಸಬೇಕು ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...