ಮಹಾಮಾರಿ ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ್ದ ಕಾರಣ ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳು ಕಳೆದ ಮೂರು ತಿಂಗಳಿನಿಂದ ಸ್ಥಗಿತಗೊಂಡಿದ್ದವು. ಪ್ರಮುಖ ಕಲಾಪಗಳನ್ನು ಆನ್ಲೈನ್ ಮೂಲಕ ನಡೆಸಲಾಗುತ್ತಿತ್ತು.
ಇದೀಗ ಲಾಕ್ ಡೌನ್ ನಲ್ಲಿ ಬಹುತೇಕ ಸಡಿಲಿಕೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ನಾಳೆಯಿಂದ ಹೈಕೋರ್ಟ್ ಮೂರು ಪೀಠಗಳು ಸೇರಿದಂತೆ ರಾಜ್ಯದಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಕಲಾಪ ಆರಂಭವಾಗಲಿದೆ. ಇದಕ್ಕಾಗಿ ಮಾರ್ಗಸೂಚಿಯನ್ನೂ ನಿಗದಿಪಡಿಸಲಾಗಿದೆ.
ವಕೀಲರಿಗೆ ಮಾತ್ರ ನ್ಯಾಯಾಲಯದ ಹಾಲ್ ಗೆ ಪ್ರವೇಶ ಇರಲಿದ್ದು, ಹೊರ ರಾಜ್ಯ, ದೇಶ ಹಾಗೂ ರೆಡ್ ಜೋನ್ ಪ್ರದೇಶಕ್ಕೆ ಹೋಗಿಲ್ಲದರ ಕುರಿತು ಅಫಿಡವಿಟ್ ಸಲ್ಲಿಸಬೇಕಿದೆ. ಅಲ್ಲದೆ ವಕೀಲರಿಗೆ ವಸ್ತ್ರಸಂಹಿತೆಯನ್ನೂ ರೂಪಿಸಲಾಗಿದೆ.