alex Certify ಗಣಪತಿ ಹೊಟ್ಟೆಗೆ ಸುತ್ತಿಕೊಂಡು ಅಚ್ಚರಿ ಮೂಡಿಸಿದ ನಾಗರಹಾವು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಣಪತಿ ಹೊಟ್ಟೆಗೆ ಸುತ್ತಿಕೊಂಡು ಅಚ್ಚರಿ ಮೂಡಿಸಿದ ನಾಗರಹಾವು…!

ಶಿವಮೊಗ್ಗ ನಗರದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದ್ದು, ಹರಕೆರೆ ರಾಮೇಶ್ವರ ದೇವಸ್ಥಾನದಲ್ಲಿರುವ ಗಣಪತಿ ಪ್ರತಿಮೆಯ ಹೊಟ್ಟೆಗೆ ನಾಗರಹಾವು ಸುತ್ತಿಕೊಂಡಿರುವುದು ಕಂಡುಬಂದಿದೆ.

ಗುರುವಾರದಂದು ಈ ಘಟನೆ ನಡೆದಿದ್ದು ಬೆಳಗ್ಗೆ ಪೂಜೆಗಾಗಿ ದೇವಸ್ಥಾನಕ್ಕೆ ತೆರಳಿದ್ದ ಅರ್ಚಕರ ಕಣ್ಣಿಗೆ ಈ ದೃಶ್ಯ ಕಂಡುಬಂದಿದೆ. ಒಂದು ಕ್ಷಣ ಬೆರಗಾದ ಅವರು ಬಳಿಕ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಕೂಡಲೇ ಧಾವಿಸಿ ಬಂದ ಸ್ನೇಕ್ ಕಿರಣ್ ಹಾವನ್ನು ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ಪುರಾಣದಲ್ಲಿ ಗಣಪತಿ ತನ್ನ ಹೊಟ್ಟೆಗೆ ಹಾವು ಬಿಗಿದುಕೊಂಡ ಸಂದರ್ಭವೊಂದು ಇದ್ದು, ಶಿವಮೊಗ್ಗದಲ್ಲಿ ನಡೆದ ಘಟನೆ ಅದನ್ನು ನೆನಪಿಸುವಂತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...