ಬೆಂಗಳೂರಿನ ಪಾದರಾಯನಪುರದಲ್ಲಿ ಶಂಕಿತ ಕರೋನಾ ಸೋಂಕು ಪೀಡಿತರನ್ನು ಕ್ವಾರಂಟೈನ್ ನಲ್ಲಿಡುವ ಸಲುವಾಗಿ ಆರೋಗ್ಯ ಕಾರ್ಯಕರ್ತರು ಹಾಗೂ ಬಿಬಿಎಂಪಿ ಸಿಬ್ಬಂದಿ ಕರೆ ತರಲು ಹೋದ ವೇಳೆ ಅವರುಗಳ ಮೇಲೆ ಹಲ್ಲೆ ನಡೆದಿತ್ತು.
ಈ ಘಟನೆ ರಾಜ್ಯದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿತ್ತು. ಇದಾದ ಬಳಿಕ ಪೊಲೀಸರು ನೂರಾರು ಮಂದಿ ಗಲಭೆಕೋರರನ್ನು ಬಂಧಿಸಿದ್ದಲ್ಲದೇ ಶಂಕಿತ ಕರೋನಾ ಸೋಂಕು ಪೀಡಿತರನ್ನು ಕ್ವಾರಂಟೈನ್ ಗೆ ಕರೆದೊಯ್ದಿದ್ದರು.
ಶಂಕಿತ ಕರೋನಾ ಸೋಂಕು ಪೀಡಿತರನ್ನು ಈಗ ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ನಲ್ಲಿಡಲಾಗಿದ್ದು, ಶಾಸಕ ಜಮೀರ್ ಅಹಮದ್ ಇಂದು ಅವರುಗಳನ್ನು ಭೇಟಿ ಮಾಡಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಅವರ ಬಳಿ ಹಲವರು ಇಲ್ಲಿ ನಮಗೆ ಕೇವಲ ಸಸ್ಯಹಾರಿ ಆಹಾರ ಸಿಗುತ್ತಿದೆ. ಹೀಗಾಗಿ ಹಜ್ ಭವನದಲ್ಲಿ ಕ್ವಾರಂಟೈನ್ ಗೆ ವ್ಯವಸ್ಥೆ ಮಾಡುವಂತೆ ಮೊರೆಯಿಟ್ಟರೆನ್ನಲಾಗಿದೆ.