alex Certify ಕೊರೊನಾ ಸಂಕಷ್ಟದ ಮಧ್ಯೆ ಭಾರೀ ಮಳೆಗೆ ಕರ್ನಾಟಕ ತತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂಕಷ್ಟದ ಮಧ್ಯೆ ಭಾರೀ ಮಳೆಗೆ ಕರ್ನಾಟಕ ತತ್ತರ

ಕರ್ನಾಟಕದಾದ್ಯಂತ ಭಾರೀ ಮಳೆಯಾಗ್ತಿದೆ. ಧಾರಾಕಾರ ಮಳೆಗೆ ಕರ್ನಾಟಕ ತತ್ತರಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲೂ ಭಾರೀ ಮಳೆಯಾಗ್ತಿದೆ. ಶರಾವತಿ ನದಿ ತುಂಬಿ ಹರಿಯುತ್ತಿದೆ. ಈ ಮಧ್ಯೆ ಶರಾವತಿ ನದಿ ಮಧ್ಯೆ ಲಾಂಚ್ ಒಂದು ಸಿಕ್ಕಿಬಿದ್ದಿತ್ತು. ಚಾಲಕನ ಎಚ್ಚರಿಕೆಯಿಂದ ಲಾಂಚ್ ದಡಕ್ಕೆ ಸೇರಲು ಯಶಸ್ವಿಯಾಗಿದೆ. ಲಾಂಚ್ ನಲ್ಲಿ 30 ಜನರಿದ್ದರು ಎನ್ನಲಾಗಿದೆ.

ಕರ್ನಾಟಕದ ಅನೇಕ ಕಡೆ ಮಳೆ ಜೋರಾಗಿದ್ದು, ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಇನ್ನು ತಲಕಾವೇರಿಯಲ್ಲಿ ಭೂಕುಸಿತವಾಗಿದೆ. ಬ್ರಹ್ಮಗಿರಿ ಬೆಟ್ಟ ಕುಸಿದಿದೆ. ಎರಡು ಮನೆಗಳು ನೆಲಸಮವಾಗಿದೆ. ಮನೆಯಲ್ಲಿ ನಾಲ್ಕು ಮಂದಿ ಇದ್ದರು ಎನ್ನಲಾಗಿದೆ. ರಕ್ಷಣಾ ಕಾರ್ಯ ನಡೆಯುತ್ತಿದೆ. ನಿನ್ನೆ ರಾತ್ರಿ ಮನೆಯಲ್ಲಿ ನಾಲ್ವರು ಇದ್ದರೂ ಎನ್ನಲಾಗಿದೆ. ಆದ್ರೆ ಇಂದು ಬೆಳಿಗ್ಗೆಯಿಂದ ಅವ್ರು ನಾಪತ್ತೆಯಾಗಿದ್ದಾರೆ. ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಕಾವೇರಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಉತ್ತರ ಕನ್ನಡದ ಅನೇಕ ತಾಲೂಕುಗಳಲ್ಲಿ ಭಾರೀ ಮಳೆಯಾಗ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಸೇತುವೆಗಳ ಮೇಲೆ ನೀರು ಬಂದಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...