ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಲ್ಲಿಯವರೆಗೆ ರಾಜ್ಯದಲ್ಲಿ 701 ಪಾಸಿಟಿವ್ ಕೇಸ್ ಆಗಿದೆ. ಸೋಂಕು ಹರಡದಂತೆ ಎಷ್ಟೇ ಕ್ರಮ ಕೈಗೊಂಡರೂ ಕೂಡ ಸೋಂಕು ಹರಡುವಿಕೆ ನಿಲ್ಲುತ್ತಿಲ್ಲ. ಅಧಿಕಾರಿಗಳು, ಸರ್ಕಾರ ಶತ ಪ್ರಯತ್ನಗಳನ್ನು ಮಾಡುತ್ತಿದ್ದರೂ ಕೊರೊನಾ ಮುಕ್ತಿ ಹೊಂದುತ್ತಿಲ್ಲ.
ಕೊರೊನಾ ಸಂಬಂಧ ನಾಳೆ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಲಿದ್ದಾರೆ. ಸಿಎಂ ಭೇಟಿಗೆ ಸಮಯ ಕೋರಿ ಸಿದ್ದರಾಮಯ್ಯ ಪತ್ರ ಬರೆದಿದ್ದರು. ಪತ್ರದನ್ವಯ ಸಿದ್ದು ಭೇಟಿಗೆ ಸಮಯ ನೀಡಿದ್ದಾರೆ ಯಡಿಯೂರಪ್ಪ.
ಸಿದ್ದು ಭೇಟಿಗೆ ನಾಳೆ ಬೆಳಗ್ಗೆ ಕೃಷ್ಣಾದಲ್ಲಿ 11.30 ಕ್ಕೆ ಸಮಯ ನಿಗದಿ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಸಿದ್ದರಾಮಯ್ಯ ಜೊತೆ ಕೆಲವು ಹಿರಿಯ ಕಾಂಗ್ರೆಸ್ ನಾಯಕರು ಇರಲಿದ್ದಾರೆ. ಕೊರೊನಾ ತಡೆಯಲು ಹಲವಾರು ವಿಚಾರಗಳು ಚರ್ಚೆಯಾಗುತ್ತಿವೆ. ಹಾಗಾಗಿ ನಾಳೆ ನಡೆಯುವ ಚರ್ಚೆ ಮಹತ್ವದ್ದಾಗಿದೆ.