alex Certify ಕರ್ನಾಟಕದಲ್ಲಿ ಸೋಂಕಿನ ಪ್ರಮಾಣ ತಿಳಿಸಿದ ಸಿರೋ ಸರ್ವೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ನಾಟಕದಲ್ಲಿ ಸೋಂಕಿನ ಪ್ರಮಾಣ ತಿಳಿಸಿದ ಸಿರೋ ಸರ್ವೆ..!

ಕೊರೊನಾ ಮಾಹಾಮರಿ ಕೋಟ್ಯಾಂತರ ಜನಕ್ಕೆ ತಗುಲಿದ್ದು, ಚೇತರಿಕೆ ಕಾಣುತ್ತಿದ್ದಾರೆ. ಇದರ ಮಧ್ಯೆ ಮತ್ತೊಂದು ಅಂಶ ಬೆಳಕಿಗೆ ಬಂದಿದೆ. ಐಸಿಎಂಆರ್ ದೇಶದಾದ್ಯಂತ ಸೀರೋ ಸರ್ವೆ ನಡೆಸಿತ್ತು. ಈ ಸರ್ವೆಯಲ್ಲಿ ಕೊರೋನಾ ಸೋಂಕು, ಪ್ರತಿರೋಧ, ತೀವ್ರತೆಗಳ ಬಗ್ಗೆ ತಿಳಿಯಬಹುದಾಗಿದೆ.

ಈ ಸರ್ವೆಯಿಂದ ಎಷ್ಟು ಜನರ ದೇಹದಲ್ಲಿ ಆಂಟಿಬಾಡಿ ಉತ್ಪತ್ತಿಯಾಗಿದೆ, ಎಷ್ಟು ಜನಕ್ಕೆ ಸೋಂಕು ಬಂದೋಗಿದೆ ಎಂಬುದನ್ನು ತಿಳಿಯಬಹುದಾಗಿದೆ. ಇನ್ನು ಕರ್ನಾಟಕದಲ್ಲಿ ಈ ಸರ್ವೆ ಹೇಳೋದೇನೆಂದರೆ ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದೆಯಂತೆ. ಒಟ್ಟು 16% ಜನಕ್ಕೆ ಕೊರೊನಾ ಬಂದು ಹೋಗಿದೆ ಎಂದು ಹೇಳಲಾಗುತ್ತಿದೆ.

ಸೆಪ್ಟೆಂಬರ್ 3 ರಿಂದ ಸೆಪ್ಟೆಂಬರ್ 16ರವರೆಗೆ ಈ ಸಮೀಕ್ಷೆ ಮಾಡಲಾಗಿದೆ. ಇನ್ನು ಎರಡನೇ ಹಂತದ ಸಮೀಕ್ಷೆಯನ್ನು ಮಾಡೋದಿಕ್ಕೆ ಚಿಂತನೆ ನಡೆದಿದೆ. ಡಿಸೆಂಬರ್ ಅಂತ್ಯ ಹಾಗೂ ಫೆಬ್ರವರಿ, ಮಾರ್ಚ್ ತಿಂಗಳುಗಳಲ್ಲಿ ಎರಡು ಹಂತದ ಸಮೀಕ್ಷೆ ನಡೆಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...