ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಕೊರೊನಾ ಹೆಚ್ಚಿರುವ ಪ್ರದೇಶವನ್ನು ಕಂಟೇನ್ಮೆಂಟ್ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಈ ಕಂಟೇನ್ಮೆಂಟ್ ಪ್ರದೇಶಕ್ಕೆ ಕೆಲವೊಂದು ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿದೆ.
ಬೆಂಗಳೂರಿನ ಪಾದರಾಯಪುರ ಕಂಟೇನ್ಮೆಂಟ್ ಪ್ರದೇಶದಲ್ಲಿದೆ. ಇಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಇಲ್ಲಿ ಯಾರಿಗೂ ಪ್ರವೇಶ ನೀಡಲಾಗ್ತಿಲ್ಲ. ಪೊಲೀಸ್, ವೈದ್ಯಕೀಯ ಸಿಬ್ಬಂದಿ ಬಿಟ್ಟು ಮತ್ತ್ಯಾರಿಗೂ ಇಲ್ಲಿ ಪ್ರವೇಶವಿಲ್ಲ. ಮಾರ್ಗಸೂಚಿ ಪ್ರಕಾರ ಮಾಧ್ಯಮಗಳ ಪ್ರತಿನಿಧಿಗಳಿಗೂ ಇಲ್ಲಿ ಪ್ರವೇಶವಿಲ್ಲ.
ಕಂಟೇನ್ಮೆಂಟ್ ಪ್ರದೇಶಕ್ಕೆ ಭೇಟಿ ನೀಡಬೇಕೆಂದ್ರೆ ಮಾಸ್ಕ್ ಸೇರಿದಂತೆ ಪಿಪಿ ಕಿಟ್ ಕಡ್ಡಾಯ ಮಾಡಲಾಗಿದೆ. ಪಿಪಿ ಕಿಟ್ ಧರಿಸಿದ್ರೆ ಮಾತ್ರ ಕಂಟೇನ್ಮೆಂಟ್ ಪ್ರದೇಶಕ್ಕೆ ಹೋಗಬಹುದು ಎಂದು ಸರ್ಕಾರ ಹೇಳಿದೆ. ಸೋಂಕು ಹೆಚ್ಚಾದ್ರೂ ಪಾದರಾಯನಪುರದಲ್ಲಿ ಜನರ ನಿರ್ಲಕ್ಷ್ಯ ಮಾತ್ರ ಕಡಿಮೆಯಾಗಿಲ್ಲ. ಜನರ ಓಡಾಟ ಎಂದಿನಂತೆ ಇದೆ.