alex Certify ಒಂದೇ ದಿನ ತಂದೆ-ಮಗ ಇಬ್ಬರಿಗೂ ಹೃದಯಾಘಾತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ದಿನ ತಂದೆ-ಮಗ ಇಬ್ಬರಿಗೂ ಹೃದಯಾಘಾತ

ಗದಗ: ಮನೆ ಸ್ವಚ್ಛಗೊಳಿಸುತ್ತಿದ್ದ ಮಗ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಮಗನ ಸಾವಿನ ಸುದ್ದಿ ಕೇಳಿದ ತಂದೆ ಕೂಡ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ನಡೆದಿದೆ.

ಕುಬೇರಪ್ಪ ಹೊಸಮನಿ (60), ಪ್ರವೀಣ್ ಹೊಸಮನಿ (25) ಮೃತ ತಂದೆ-ಮಗ. ಕುಬೇರಪ್ಪ ನಿವೃತ್ತ ಶಿಕ್ಷಕರಾಗಿದ್ದು, ತಮ್ಮ ಅಣ್ಣನ ಮಗನನ್ನು ಸ್ವಂತ ಮಗನಂತೆ ತಮ್ಮ ಮನೆಯಲ್ಲೇ ಇರಿಸಿಕೊಂಡು ವಿದ್ಯಾಭ್ಯಾಸ ಕೊಟ್ಟು ಸಾಕಿ ಸಲಹಿದ್ದರು.

ಮನೆಯಲ್ಲಿ ತಿಥಿಯಿದೆ ಎಂದು ಪ್ರವೀಣ್ ಮನೆ ಸ್ವಚ್ಛ ಮಾಡಲು ಮುಂದಾಗಿದ್ದಾನೆ. ಈ ವೇಳೆ ಆತ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾನೆ. ಮಗನ ಸಾವಿನ ಸುದ್ದಿ ಕೇಳಿ ಕುಬೇರಪ್ಪನವರಿಗೆ ಶಾಕ್ ಆಗಿ ಹೃದಯಾಘಾತವಾಗಿದೆ. ತಂದೆ-ಮಗ ಇಬ್ಬರೂ ಒಂದೇ ದಿನ ಸಾವಿನ ಮನೆ ಸೇರಿದ್ದಾರೆ. ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...