alex Certify ಉಪ ಚುನಾವಣೆಯಲ್ಲಿನ ಬಿಜೆಪಿ ಗೆಲುವಿನ ಹಿಂದೆ ವಿಜಯೇಂದ್ರ ಒಬ್ಬರೇ ಇಲ್ಲ: ಈಶ್ವರಪ್ಪ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಪ ಚುನಾವಣೆಯಲ್ಲಿನ ಬಿಜೆಪಿ ಗೆಲುವಿನ ಹಿಂದೆ ವಿಜಯೇಂದ್ರ ಒಬ್ಬರೇ ಇಲ್ಲ: ಈಶ್ವರಪ್ಪ ಹೇಳಿಕೆ

ಆರ್.ಆರ್. ನಗರ ಹಾಗೂ ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗಿದೆ. ಈ ಗೆಲುವಿಗೆ ಮುಖ್ಯ ಕಾರಣ ವಿಜಯೇಂದ್ರ ಎಂದು ಅವರ ಅಭಿಮಾನಿಗಳು ಕಾರ್ಯಕರ್ತರು ಹಾಗೆಯೇ ಒಂದಿಷ್ಟು ಜನ ಶಾಸಕರು ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಆದರೆ ಈ ಗೆಲುವಿನ ಹಿಂದೆ ವಿಜಯೇಂದ್ರ ಅವರ ಜೊತೆಗೆ ಬೇರೆ ಬೇರೆ ನಾಯಕರ ಕಷ್ಟ ಕೂಡ ಇದೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ವಿಜಯೇಂದ್ರ ಉಪ ಚುನಾವಣೆಯಲ್ಲಿ ಕೆಲಸ ಮಾಡಿಲ್ಲ ಅಂತಲ್ಲ. ಅವರ ಜೊತೆ ಇತರ ನಾಯಕರು ಕೆಲಸ ಮಾಡಿದ್ದಾರೆ. ಆದರೆ ಅವರೊಬ್ಬರನ್ನೇ ವೈಭವೀಕರಿಸಲಾಗುತ್ತಿದೆ. ಆಗಲಿ, ಆದರೆ ಇತರ ನಾಯಕರ ಕೆಲಸವನ್ನೂ ನೋಡಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಎಲ್ಲರ ಪ್ರಯತ್ನದಿಂದ ಗೆಲುವು ಸಾಧಿಸಿದ್ದೇವೆ. ಆರ್.ಆರ್. ನಗರದಲ್ಲಿ ಅಶೋಕ್, ಅಶ್ವಥ್ ನಾರಾಯಣ್ ಕೂಡ ಕೆಲಸ ಮಾಡಿದ್ದಾರೆ. ಆದರೆ ಅವರೊಬ್ಬರನ್ನೇ ವೈಭವೀಕರಿಸುವ ಕೆಲಸ ಆಗುತ್ತಿದೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...