alex Certify ಇಂದ್ರಜಿತ್ ಗೆ ರಕ್ಷಣೆ ಕೊಡಲು ಸಿದ್ಧ; ತನಿಖೆಗೆ ಸಹಕರಿಸಲಿ ಎಂದ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದ್ರಜಿತ್ ಗೆ ರಕ್ಷಣೆ ಕೊಡಲು ಸಿದ್ಧ; ತನಿಖೆಗೆ ಸಹಕರಿಸಲಿ ಎಂದ ಸಚಿವ

ಚಿಕ್ಕಮಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ನಾವು ರಕ್ಷಣೆ ನೀಡುತ್ತೇವೆ. ಡ್ರಗ್ಸ್ ಮಾಫಿಯಾದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

ರಾಜಕಾರಣಿಗಳು ಹಾಗೂ ಕನ್ನಡ ಚಿತ್ರರಂಗದ ನಟ-ನಟಿ-ನಿರ್ದೇಶಕರು ಸೇರಿ ಹಲವರು ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ. ತಮಗೆ ರಕ್ಷಣೆ ನೀಡಿದಲ್ಲಿ ಈ ಮಾಫಿಯಾದಲ್ಲಿ ಯಾರೆಲ್ಲ ಇದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಲು ಸಿದ್ಧ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದರು.

ಈ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಸಚಿವ ಸಿ.ಟಿ. ರವಿ, ಇಂದ್ರಜಿತ್ ಲಂಕೇಶ್ ಅವರಿಗೆ ಪೊಲೀಸ್ ಇಲಾಖೆಯಿಂದ ರಕ್ಷಣೆಯ ವ್ಯವಸ್ಥೆ ಮಾಡಿಸುವ ಜವಾಬ್ದಾರಿ ನಮ್ಮದು. ಡ್ರಗ್ಸ್ ಮಾಫಿಯಾ ಬಗ್ಗೆ ಅವರಿಗೆ ಗೊತ್ತಿರುವ ಎಲ್ಲಾ ಮಾಹಿತಿ ನೀಡಲಿ ಎಂದರು.

ಡ್ರಗ್ಸ್ ಜಾಲ ಎಂಬುದು ರಾಜ್ಯ, ಅಂತರಾಜ್ಯಗಳ ವ್ಯವಸ್ಥಿತ ಜಾಲ. ಈ ಮಾಫಿಯಾಗೆ ಇನ್ನಷ್ಟು ಜನ ಬಲಿಯಾಗದಂತೆ ತಡೆಯಬೇಕಿದೆ. ಈ ಮಾಫಿಯಾದಲ್ಲಿ ಯಾರೆಲ್ಲ ಇದ್ದಾರೆ ಎಂಬ ಬಗ್ಗೆ ಸಂಪೂರ್ಣ ತನಿಖೆಯಾಗಬೇಕಿದೆ. ಹಾಗಾಗಿ ಇಂದ್ರಜಿತ್ ಲಂಕೇಶ್ ತನಿಖೆಗೆ ಸಹಕರಿಸಬೇಕು. ಅವರಿಗೆ ತಿಳಿದ ಮಾಹಿತಿ ನೀಡಬೇಕು. ಅವರಿಗೆ ರಕ್ಷಣೆ ನೀಡುವ ಜವಾಬ್ದಾರಿ ನಮ್ಮದು. ಯಾರಿಗೂ ಹೆದರುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...