alex Certify ಅವರ ಧಮ್ ಏನೆಂದು 5 ವರ್ಷ ಹತ್ತಿರದಿಂದ ನೋಡಿದ್ದೇವೆ ಎಂದ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವರ ಧಮ್ ಏನೆಂದು 5 ವರ್ಷ ಹತ್ತಿರದಿಂದ ನೋಡಿದ್ದೇವೆ ಎಂದ ಸಚಿವ

ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ನಮ್ಮ ಧಮ್ ಚೆಕ್ ಮಾಡುವುದು ಬೇಡ. ಅವರ ಧಮ್ ಏನೆಂದು 5 ವರ್ಷ ಹತ್ತಿರದಿಂದ ನೋಡಿದ್ದೇವೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಧಮ್ ಇದ್ದರೆ ಅಧಿವೇಶನ ಕರೆಯಲಿ ಅಂತಾರೆ. ಅಧಿವೇಶನ ಕರೆದರೆ ಚರ್ಚೆ ಮಾಡದೇ ಹೊರ ಹೋಗುತ್ತಾರೆ. ಬಳಿಕ ಹೊರ ಬಂದು ಧಮ್ ಬಗ್ಗೆ ಮಾತನಾಡುತ್ತಾರೆ. ಸಿದ್ದರಾಮಯ್ಯನವರದ್ದು ಕೇವಲ ರಾಜಕೀಯ ಹೇಳಿಕೆಗಳಷ್ಟೇ ಎಂದರು.

ಕೋವಿಡ್ ಸಮಯದಲ್ಲಿ ಸಿಎಂ, ಬಿ ಎಸ್ ವೈ ಒಬ್ಬರೇ ಹೀರೋ ಆಗಿ ಕೆಲಸ ಮಾಡಿದ್ದಾರೆ. ಕೋವಿಡ್-19ರಲ್ಲಿ ಎಲ್ಲಾ ರೀತಿಯ ದುಷ್ಮನ್ ಹಾಗೂ ವಿಲನ್ ಗಳನ್ನು ನಿಭಾಯಿಸಿ ಎಲ್ಲರ ಜೊತೆ ಸಾಮರಸ್ಯದಿಂದ ಕೊರೊನಾ ಹಾಗೂ ನೆರೆಗಳನ್ನು ನಿಭಾಯಿಸಿದ್ದಾರೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...